ಚಾಮರಾಜನಗರ/ ಹನೂರು :ತಾಲೂಕಿನ ಗಂಗನ ದೊಡ್ಡಿ ಗ್ರಾಮದ ನೊಕ್ಕಣ್ಣತ ಎಂಬುವರ ಜಮೀನಿನಲ್ಲಿ ಸೋಮವಾರ ತಡ ರಾತ್ರಿ 11:00 ಗಂಟೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಕುರಿ ಮೃತಪಟ್ಟಿದೆ. ಹಾಗೂ ಹನೂರು ತಾಲೂಕಿನ ರಾಮಾಪುರ ಗ್ರಾಮಕ್ಕೆ ಸೇರಿದ ಅಪ್ಪಿ ಕುಳಿ ರವಿ ಎಂಬುವವರ ಜಮೀನಿನಲ್ಲಿ ಸಮಯ 3:00 ಗಂಟೆಯಲ್ಲಿ ಮೇಕೆಯ ಮೇಲೆ ಚಿರತೆ ದಾಳಿ ಮಾಡಿ ಮೃತ ಪಟ್ಟಿದೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಡಿ ಆರ್ ಎಫ್ ವಿನಾಯಕ್, ಉಪವಲಯ ಅರಣ್ಯಾಧಿಕಾರಿ ಭೀಮಶಿ, ಗಸ್ತು ವನಪಾಲಕ , ರೈತ ಸಂಘಟನೆ ಹನೂರು ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಇದ್ದರು.
ವರದಿ: ಉಸ್ಮಾನ್ ಖಾನ್
