
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಿಮನೆಯಲ್ಲಿ ನಗು ಫೌಂಡೇಶನ್ ಕಡೆಯಿಂದ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜ್ಯೋತಿಯವರು ವಹಿಸಿಕೊಂಡಿದ್ದರು. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಗು ಫೌಂಡೇಶನ್ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಇದೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಮತಿ ಯಶೋಧಾ ಮೇಡಂರವರು ಮಾತನಾಡಿ ಫೌಂಡೇಶನ್ ರವರು ನಮ್ಮ ತಾಲ್ಲೂಕಿನ ಹಲವು ಶಾಲೆಗಳನ್ನು ಅಭಿವೃದ್ಧಿ ಮಾಡಿರುವುದು ಮೆಚ್ಚುವಂತಹ ಕಾರ್ಯ ಎಂದು ತಿಳಿಸಿದರು. ಶಿಕ್ಷಕರಾದ ಸುರೇಶ ಸಿ ಆರ್ (ಚೌಡ್ಲಾಪುರ ಸೂರಿ )ರವರು ನಗು ಫೌಂಡೇಶನ್ ಬಗ್ಗೆ ಪರಿಚಯ ಮಾಡಿಕೊಟ್ಟರು. ಉಪಸ್ಥಿತರಿದ್ದ ಮತ್ತಷ್ಟು ಮಹನೀಯರು ನಗು ಫೌಂಡೇಶನ್ ಕಾರ್ಯವನ್ನು ಪ್ರಶಂಸಿದರು. ಅತಿಥಿಗಳ ಶುಭ ಹಾರೈಕೆಯ ನಂತರ ನೋಂದಣಿ ಮಾಡಿಕೊಂಡಿದ್ದ 9 ಶಾಲೆಗಳ 253 ಮಕ್ಕಳಿಗೆ ನಗು ಫೌಂಡೇಶನ್ ಕಡೆಯಿಂದ ಅತ್ಯುತ್ತಮ ಗುಣಮಟ್ಟದ ನೋಟ್ ಬುಕ್ ನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಆದರ್ಶ , ಶಿಕ್ಷಣ ಸಂಯೋಜಕರಾದ ಸುಚಿತ್ರ ಚಂದ್ರ , ದೈಹಿಕ ಶಿಕ್ಷಣ ಪರಿವೀಕ್ಷರಾದ ಛಲವಾದಿ , ಬಿ .ಆರ್ .ಪಿ ಗಳಾದ ಸುನೀತಾ , ಸಿ. ಆರ್. ಪಿ ಗಳಾದ ಜ್ಯೋತಿ ಮಹಾಲಕ್ಷ್ಮಿ ಭಟ್, ಎಸ್.ಡಿ.ಎಂ.ಸಿ ಯವರಾದ ಶ್ರೀನಿವಾಸ್ , ಸುರೇಶ್ , ಮುಖ್ಯಶಿಕ್ಷರಾದ ಅಭಿಷೇಕ್ , ಶಿಕ್ಷಕರಾದ ಸುಕೇಶ್ ,ಪ್ರಸನ್ನ ಲೋಹಿತ್ , ರಂಗನಾಥ್ ಮುಂತಾದವರು ಹಾಜರಿದ್ದರು. ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಸಂಪನ್ನ ಮಾಡಿಕೊಟ್ಟ ಕರಿಮನೆ ಶಾಲೆಗೆ ಇಲಾಖೆ ಮತ್ತು ಫೌಂಡೇಶನ್ ಕಡೆಯಿಂದ ಭಾವಬಿಂದು ಪ್ರಣಾಮಗಳು.
ನೋಟ್ ಬುಕ್ ಪಡೆದ ಶಾಲೆಗಳು
೧. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ.
೨.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಮ್ಮಡವಳ್ಳಿ.
೩.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ ಬಿಳ್ರೆ.
೪.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಕೆರೆ (ಕರಿಮನೆ ).
೫.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಮಕ್ಕಿ.
೬.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಂಗಿನ ಮನೆ.
೭.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಪ್ಪುಂಜಿ .
೮.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಬ್ಬಿಗದ್ದೆ .
೯.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರ್ಯದೇವಸ್ಥಾನ .
- ಕರುನಾಡ ಕಂದ
