ಹಾಸನ :ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಮತ್ತು ಲೈಂಗಿಕ ಕಿರುಕುಳ ಮತ್ತು ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣಕ್ಕೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕೆಂದು ವರುಣ್ ಚಕ್ರವರ್ತಿ ಅವರು ಶಿರಸ್ತೇದಾರ್ ಅನಿಲ್ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಧರ್ಮಸ್ಥಳ ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ತೀವ್ರವಾಗಿ ಚರ್ಚೆ ಆಗುತ್ತಿರುವುದರಿಂದ ರಾಜ್ಯದ ನಾಗರಿಕರಲ್ಲಿ ಅಸ್ಪಷ್ಟತೆ ಕಂಡು ಬಂದಿರುವುದರಿಂದ ದಯವಿಟ್ಟು ತಾವು ಸಂಬಂಧಿಸಿದ ಪ್ರಕರಣದಲ್ಲಿ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ಮಲವಿಯಲ್ಲಿ ಕೋರಿದ್ದಾರೆ.
1) ಸೌಜನ್ಯ ಅವರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ನಿಜವಾದ ಆರೋಪಿಗಳ ಪತ್ತೆಗೆ ಮುಂದಾಗಬೇಕು, ಅಲ್ಲದೇ ಪ್ರಕರಣದಲ್ಲಿ ಬಂಧಿಸಲಾಗಿದ್ದ ಸಂತೋಷ್ ರಾವ್ಗೆ ಸೂಕ್ತ ಪರಿಹಾರ ನೀಡಬೇಕು.
2) ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿರುವ ಭೂ ಅಕ್ರಮ ಕಬಳಿಕೆ ಬಗ್ಗೆ ತನಿಖೆ ನಡೆಸಲು ತನಿಖಾ ತಂಡ ರಚಿಸಬೇಕು.
3) ಸೌಜನ್ಯ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಪ್ರಕರಣದ ತನಿಖೆಯು ಲೋಪಗಳಿಂದ ಕೂಡಿದ್ದು, ಮರು ತನಿಖೆಗೆ ಅರ್ಹವಾಗಿದೆ.
4) ನ್ಯಾಯಾಲಯವೇ ಹೇಳುವಂತೆ ಪ್ರಕರಣವನ್ನು ಸಿಬಿಐ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿಲ್ಲ ಪ್ರಕರಣವನ್ನು ಎಸ್ಐಟಿ ಮೂಲಕ ಮರು ತನಿಖೆ ನಡೆಸಬೇಕು.
5) ಸೌಜನ್ಯ ಸಾವಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಯಾವುದೇ ಸರ್ಕಾರ ಮಾಡಿಲ್ಲ. ಬಲಾಡ್ಯ ಶಕ್ತಿಗಳ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಯಾವುದಾದರೂ ಸಚಿವರು, ಅಧಿಕಾರಿಗಳ ಮಕ್ಕಳಿಗೆ ಅನ್ಯಾಯವಾದಾಗ ಇಡೀ ಸರ್ಕಾರ ಅವರ ಪರವಾಗಿ ನಿಲ್ಲುವಂತೆ ಸೌಜನ್ಯ ಪ್ರಕರಣದಲ್ಲಿಯೂ ವರ್ತಿಸಬೇಕು
ಆಡಳಿತ ಸರ್ಕಾರವು ಈ ಕೂಡಲೇ ಪ್ರಾಮಾಣಿಕ ಮತ್ತು ಭಕ್ಷ ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಿ ಬಗೆಹರಿಯದೆ ಉಳಿದಿರುವ ಸೌಜನ್ಯ ಪ್ರಕರಣದ ನಿಜವಾದ ಆರೋಪಿಗಳನ್ನು ಕಾನೂನಿಗೆ ಒಪ್ಪಿಸಬೇಕು.
6) ಸೌಜನ್ಯ ಪ್ರಕರಣದ ಹಿಂದಿರುವ ನಿಜ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಮೂಲಕ ನ್ಯಾಯ ಒದಗಿಸಿಕೊಟ್ಟು ಹೆಣ್ಣಿನ ಗೌರವನ್ನು ಉಳಿಸಬೇಕು.
7) ಸೌಜನ್ಯ ಕೊಲೆ ಹಾಗೂ ಅತ್ಯಾಚಾರದ ವಿಷಯವಾಗಿ ಧ್ವನಿ ಮಾಡುವ ಹೋರಾಟಗಾರರಿಗೆ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ಕೋರುತ್ತೇನೆ.
8) ಹಲವು ವರ್ಷಗಳ ಕಾಲ ಜೈಲುವಾಸ ಹಾಗೂ ತನ್ನದಲ್ಲದ ತಪ್ಪಿಗೆ ಸಮಾಜದಲ್ಲಿ ಕಳಂಕ ಹೊತ್ತುಕೊಂಡ ನಿರಪರಾಧಿ ಸಂತೋಷ್ ಗೆ ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸಿ ಸುಳ್ಳು ಆರೋಪ ಮಾಡಿದ ಅಧಿಕಾರಿಗಳು ಹಾಗೂ ನಿಜವಾದ ಕೊಲೆಗಾರರು ಸಂತೋಷ್ ಅವರಿಗೆ 50 ಲಕ್ಷ ಪರಿಹಾರ ನೀಡಬೇಕು.
ಬಿಡದಿಯ ವಿಷಯದಲ್ಲಿ ತಿಳಿಸಿರುವಂತೆ ಕರ್ನಾಟಕ ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಯತ್ನ ಅತ್ಯಾಚಾರ, ಕೊಲೆ, ಲೈಂಗಿಕ ಕಿರುಕುಳ ಪ್ರಕರಣಗಳು ಸಾಂಕ್ರಾಮಿಕ ರೋಗದಂತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬನಿಂದ 5 ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಕೊಲೆ ಮಾಡಿರುವ ಪ್ರಕರಣ ಮಾಸುವ ಮುಂಚೆಯೆ ಬಿಡದಿಯ ಭದ್ರಾಪುರ ನಿವಾಸಿಯಾದ ಶಾಶ್ವತ ಕಿವುಡುತನ ಮತ್ತು ಮಾತನಾಡಲು ಬಾರದ 14 ವರ್ಷದ ‘ಖುಷಿ’ ಎಂಬ ಬಾಲಕಿಯನ್ನು ಅತ್ಯಾಚಾರ ಮಾಡಿ ಅಮಾನುಷವಾಗಿ ದೇಹಕ್ಕೆ ಚಿತ್ರ ವಿಚಿತ್ರ ರೀತಿಯಲ್ಲಿ ಹಿಂಸಿಸಿ ಹತ್ಯೆ ಮಾಡಿರುವ ಈ ಸುದ್ದಿಯಿಂದ ರಾಜ್ಯದ ಹೆಣ್ಣು ಮಕ್ಕಳಗೆ ಭಯದ ವಾತಾವರಣ ಉಂಟು ಮಾಡಿದೆ
ದಯವಿಟ್ಟು ಇಂತಹ ವಿಕೃತಿ ಮನಸುಳ್ಳ ವ್ಯಕ್ತಿಗಳನ್ನು ಪತ್ತೆ ಮಾಡಿ ಶಿಕ್ಷೆ ನೀಡಬೇಕು ಹಾಗೂ ರಾಜ್ಯದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಸಂಬಂಧಪಟ್ಟ ಈ ರೀತಿಯ ದುರಂತಗಳಿಂದ ಭಯ ಭೀತಿ ಉಂಟಾಗದಂತೆ ಕ್ರಮ ವಹಿಸಬೇಕೆಂದು ಮನವಿ.
ಈ ಕೃತ್ಯವೆಸಗಿರುವ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಹಂತಕರನ್ನು ಬಂಧಿಸಿ ಗಲ್ಲಿಗೇರಿಸಬೇಕೆಂದು ಒತ್ತಾಯ ಇರುತ್ತದೆ, ರಾಮನಗರ ಜಿಲ್ಲಾಡಳಿತ ಮೃತ ಕುಟುಂಬಕ್ಕೆ 4 ಲಕ್ಷ ಹಣವನ್ನು ಪರಿಹಾರವಾಗಿ ಘೋಷಿಸಿದೆ. ಈ ಕುಟುಂಬವು ಬುಡಕಟ್ಟು ಅಲೆಮಾರಿ ಸಮುದಾಯಕ್ಕೆ ಸೇರಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದು ಬಡ ಕುಟುಂಬವಾಗಿರುತ್ತದೆ. ಘನ ಸರ್ಕಾರ ಈ ಕುಟುಂಬಕ್ಕೆ 50 ಲಕ್ಷ ಪರಿಹಾರ ಹಣವನ್ನು ನೀಡಬೇಕೆಂದು ವರುಣ್ ಚಕ್ರವರ್ತಿ ಹಾಸನ ಮನವಿ ಮಾಡಿದರೆ ಮತ್ತು ಅಜಿತ್ ಇರ್ಫಾನ್ ಯುವರಾಜ್ ವಿನಯ್ ಮತ್ತಿರರು ಕೇಳಿಕೊಳ್ಳುತ್ತೇವೆ, ವಿಶೇಷವಾಗಿ ವರುಣ್ ಚಕ್ರವರ್ತಿ ಅವರು ಗೌರವಾನ್ವಿತ ಸನ್ಮಾನ್ಯ ಪ್ರಧಾನ ಮಂತ್ರಿ ಅವರಿಗೂ ಕೂಡಾ ಪತ್ರ ಬರೆದಿದ್ದಾರೆ ವಿಶೇಷವಾಗಿ ಒಂದು ಹೆಣ್ಣಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪ್ರಧಾನ ಮಂತ್ರಿಯವರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಪ್ರಕರಣವನ್ನು ತನಿಖೆಗೊಳಿಸಬೇಕೆಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ
