
ಸಾರ್ವಜನಿಕ ಕೆಲಸದ ನಿಮಿತ್ಯ ಪುರಸಭೆ ಕಾರ್ಯಾಲಯಕ್ಕೆ ಹೋದವರಿಗೆ ಬಿಗ್ ಶಾಕ್ !
ಯಾದಗಿರಿ/ಗುರುಮಠಕಲ್: ಜೂ ೬. ಶುಕ್ರವಾರ ಬೆಳ್ಳಿಗೆಯಿಂದ ಪುರಸಭೆ ಕಾರ್ಯಾಲಯಕ್ಕೆ ಬಂದ ನಾಗರಿಕರಿಗೆ ಒಂದು ಕ್ಷಣ ಇಂದು ಸಾರ್ವಜನಿಕ ರಜೆ ಇದೆಯೆನೋ ಎಂಬಂತೆ ಭಾಸವಾಗಿದೆ ಕಾರಣ ಸಮಯ ಮುಂಜಾನೆ 11.30 ದಾಟಿದರೂ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು ಮತ್ತು ಖಾಲಿ ಕುರ್ಚಿಗಳು.
ಈ ಕುರಿತಾಗಿ ಕಚೇರಿಯಲ್ಲಿ ವಿಚಾರಿಸಿದಾಗ ಮುಖ್ಯಾಧಿಕಾರಿಗಳು ರಜೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ, ಅವರ ಅನುಪಸ್ಥಿತಿಯಲ್ಲಿ ವ್ಯವಸ್ಥಾಪಕರು, ಕಂದಾಯ ಅಧಿಕಾರಿಗಳು ಸೇರಿದಂತೆ ಯಾರೊಬ್ಬರೂ ಇಲ್ಲದಿರುವದು, ಇಂದು ಮತ್ತು ನಾಳೆ ರಜೆ ಇರುವದರಿಂದ ಹಲವು ಕಾರಣಗಳಿಂದ ಬಂದಿರುವ ಸಾರ್ವಜನಿಕರಿಗೆ ತೀವ್ರ ನಿರಾಸೆ ಉಂಟಾಯಿತು.
ಒಂದೇ ದಿನ ಎಲ್ಲಾ ಅಧಿಕಾರಿಗಳು ಹೇಗೆ ರಜೆ ತೆಗೆದು ಕೊಳ್ಳಲು ಸಾಧ್ಯವಾಗುತ್ತದೆ ಎಂದು ದೂರವಾಣಿ ಮುಖಾಂತರ ಮೇಲಾಧಿಕಾರಿಗಳಾದ ಡಾ. ಹಂಪಯ್ಯ ಸಜ್ಜನ AD ಯಾದಗಿರಿ ಅವರ ಗಮನಕ್ಕೆ ತಂದಾಗ ಮುಖ್ಯಾಧಿಕಾರಿಗಳು ಅನುಮತಿ ಪಡೆದು ಹೋಗಿರುವುದಾಗಿ ತಿಳಿಸಿದ್ದಾರೆ ಮತ್ತು ಉಳಿದ ಅಧಿಕಾರಿಗಳ ಕುರಿತಾಗಿ ಮಾಹಿತಿ ಪಡೆಯುವದಾಗಿ ತಿಳಿಸಿದ್ದಾರೆ ಮತ್ತು ಕಂದಾಯ ಅಧಿಕಾರಿ ಶಿವಲೀಲಾ ಅವರು ಸತತವಾಗಿ ಕಚೇರಿಗೆ ಗೈರಾಗುತ್ತಿರುವ ವಿಚಾರವಾಗಿ ಮಾಹಿತಿ ಪಡೆದು ಕ್ರಮ ತೆಗೆದು ಕೊಳ್ಳುವದಾಗಿ ಶ್ರೀಕಾಂತ್ ತಲಾರಿ ಅವರಿಗೆ ತಿಳಿಸಿದ್ದಾರೆ.
ಸುಮಾರು 20ಸಾವಿರ ಜನಸಂಖ್ಯೆ, 23 ವಾರ್ಡ್ ಗಳುಳ್ಳ ಗುರುಮಠಕಲ್ ಪಟ್ಟಣದ ಸಾರ್ವಜನಿಕರ ಅಹವಾಲು, ಬಿ- ಖಾತಾ, ಆಸ್ತಿ ತೆರಿಗೆ, ಅಂಗಡಿ ಪರವಾನಿಗೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬರುವ ಜನರಿಗೆ ಈ ರೀತಿ ಅಧಿಕಾರಿಗಳು ಕೈಗೆ ಸಿಗದೆ ಕೆಲಸಗಳು ವಿಳಂಬವಾಗುತ್ತಿರುವದು ಮತ್ತು ಅಂಗವಿಕರು ಪುರಸಭೆಗೆ ಬಂದಾಗ ಮೇಲಾಧಿಕಾರಿಗಳು ಇಲ್ಲದಿರುವುದರಿಂದ ಇವರ ಬೇಜವಾಬ್ದಾರಿ ಎದ್ದು ಕಾಣಿಸುತ್ತದೆ.
ಏಕಏಕಿಯಾಗಿ ಎಲ್ಲಾ ಅಧಿಕಾರಿಗಳು ಅನುಪಸ್ಥಿತಿಯಾದರೆ ಪುರಸಭೆ ನಿರ್ವಹಣೆ ಮಾಡಬೇಕಾದವರಾರು ಎಂಬ ಪ್ರಶ್ನೆಗೆ ಮೇಲಾಧಿಕಾರಿಗಳು ಉತ್ತರ ನೀಡಬೇಕು. ಕಾರ್ಯಾಲಯದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದೆಯೇ? ಸಿ. ಸಿ. ಟಿ ವಿ ದುರಸ್ಥಿಗೊಳಿಸಿ, ಮನಬಂದಂತೆ ವರ್ತಿಸುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಶ್ರೀಕಾಂತ ತಲಾರಿ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಗುರುಮಠಕಲ್ ಅಗ್ರಹಿಸಿದ್ದಾರೆ.
ಕೇವಲ ಮುಖ್ಯಾಧಿಕಾರಿ ಮಾತ್ರ ಅನುಮತಿ ಪಡೆದು ರಜೆಯಲ್ಲಿದ್ದು, ಉಳಿದ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಕಾಮಗಾರಿ ಪರಿಶೀಲನೆಯಲ್ಲಿರುವದಾಗಿ ಲಕ್ಷ್ಮೀ ಕಾಂತ ರೆಡ್ಡಿ ಯೋಜನ ಅಧಿಕಾರಿಗಳು PD ತಿಳಿಸಿದ್ದಾರೆ, ಇಂದು ಗೈರಾದವರ ವಿರುದ್ಧ ಕಾರಣ ಕೇಳಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
