ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಿವಿಧ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕಾನೂನು ಗಾಳಿಗೆ ತೂರಿ ಸಂಬಂಧಿಸಿದ ಶಾಲಾ ಮುಖ್ಯ ಗುರುಗಳು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎಂದು ನೊಂದ ಅಂಗವಿಕಲ ಅಭ್ಯರ್ಥಿ ತಮ್ಮ ನೋವನ್ನು ಹೇಳಿದರು.
ತಾಲೂಕಿನ ವಿವಿಧ ಕ್ಲಸ್ಟರ್ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಸಂಬಂಧಿಸಿದಂತೆ ವಿಷಯವಾರು ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿರುತ್ತಾರೆ ಆದರೆ ಯಾವ- ಯಾವ ಕ್ಲಸ್ಟರ್ ಹಾಗೂ ಗ್ರಾಮಗಳಲ್ಲಿ ಎಷ್ಟು ಅತಿಥಿ ಶಿಕ್ಷರ ಹುದ್ದೆ ಖಾಲಿ ಇವೆ? ಯಾವ ಮಾನ ದಂಡಗಳ ಆಧಾರದ ಮೇಲೆ ಮತ್ತು ಯಾವ ಆಧ್ಯತೆ ಮೇಲೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರೆ ಯಾವುದೇ ರೀತಿಯಾದ ಅಭ್ಯರ್ಥಿಗಳಿಗೆ ಗೊಂದಲಗಳು ಇರುವುದಿಲ್ಲ; ಮಂದೇವಾಲ ಹಾಗೂ ಮಾಹೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಚೌಡಿಹಾಳ ಹಾಗೂ ಫೀರಪ್ಫ ಮಸಳಿ ಎಂಬುವರು ಅತಿಥಿ ಶಿಕ್ಷಕರ ಅರ್ಜಿ ಕೊಡಲು ಹೋದ ಶಿವಣ್ಣ ಬಗಲಿ ( MA B.Ed ಮತ್ತು TET ) ಎರಡು ಪತ್ರಿಕೆ ಅರ್ಹತೆ ಪಡೆದು ಎಂಟು ವರ್ಷಗಳ ಕಾಲ ಅತಿಥಿ ಶಿಕ್ಷಕನಾಗಿ ಸೇವೆ ಸಲ್ಲಿಸಿದರೂ ಅವರ ಅರ್ಜಿ ಸ್ವೀಕರಿಸದೆ ಅವನನ್ನು ಅವಾಚ್ಚ ಪದಗಳಿಂದ ಬೈದು ಅವಮಾನ ಮಾಡಿ ಕಳಿಸಿದ್ದಾರೆ.
ಇನ್ನು ನೊಂದ ಅಂಗವಿಕಲ ಅಭ್ಯರ್ಥಿ
ಶಿವಾನಂದ ಬಗಲಿಯವರ ಕ್ಕಿಂತಲೂ ಕಡಿಮೆ ವಿದ್ಯಾರ್ಹತೆ ಹಾಗೂ ಕಡಿಮೆ ಫಲಿತಾಂಶ ಹೊಂದಿದ ಅಭ್ಯರ್ಥಿಯನ್ನು ನೇಮಕಾತಿ ಮಾಡಿರುತ್ತಾರೆ ಆದ ಕಾರಣ ಎಲ್ಲಾ ಅರ್ಹತೆ ಇರುವ ನನ್ನನ್ನು ತಿರಸ್ಕಾರ ಮಾಡಿದ ಶಿಕ್ಷಕರ ಮೇಲೆ ಮೇಲಾಧಿಕಾರಗಳು ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ನನಗೆ ನೇಮಕಾತಿ ಮಾಡಿಕೊಡಿ ಎಂದು ನೊಂದ ಕರುನಾಡ ಕಂದ ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವರದಿ: ಚಂದ್ರಶೇಖರ ಪಾಟೀಲ್
