ಎದೆಯೊಡ್ಡಿ ನಿಲ್ಲು
ಕಷ್ಟ ಮೆಣದಂತೆ ಕರಗುತ್ತದೆ
ತಾತ್ಕಾಲಿಕ ನಷ್ಟವೇ ಸರಿ
ವಿಪತ್ತಿಗೆ ಬೇಕಲ್ಲವೇ.
ಮುದುಡಿದೆಂದು ಬಿಸಾಡದೇ
ಮರುಬಳಕೆ ಮಾಡಿಬಿಡು
ರಾಡಿಗೊಂಡ ಮನಸು
ಮತ್ತೆ ಶಾಂತವಾಗುವುದು.
ನೆತ್ತಿಯ ಬುತ್ತಿ ಕಟ್ಟಿಕೊಂಡು
ಜಗ ಜಟ್ಟಿಯಂತೆ ಕಾದಾಡಿ
ತಾರೆಯ ಮುಡಿಗೇರಿಸಿಕೊಂಡು
ಮೊಗಸಾಲೆಯ ರಾರಾಜಿಸು.
ತಂಟೆ ತಕರಾರು ಮಾಡಲಿಬಿಡಿ
ಭಂಟನಂತೆ ಎದೆಯುಬ್ಬಿಸಿ
ಮದಗಜವ ಹುಟ್ಟಡಗಿಸಿ
ಮೋಜಿನ ವಲಯಕೆ ಪಾಠ ಕಲಿಸುತ.
ಗಾಜಿನ ಜೀವನ
ಒಡೆದು ಹೋದೀತು ಜೋಕೆ
ಕ್ರಮ ವಹಿಸಿ ಮಾತನಾಡಿ
ಸುಗಮ ದಾರಿ ಮಾಡಿಕೊಳ್ಳಲು.
- ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು
