ಹಗಲು ಇರಳು ದುಡಿದು
ತಂದ ಧಾನ್ಯಗಳಿಗೆ ಬೆಲೆ ಇಳಿದು
ನಿನ್ನ ಹೆಸರಲ್ಲಿ ರಾಜಕೀಯ ಬೆಳೆದು
ನಿನಗೆ ಕೊಡುವ ನ್ಯಾಯ ಇಳಿದು||
ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದು
ನೀ ಇಲ್ಲಾ ಹೋದರೆ ತಿನ್ನದು ಮಣ್ಣು
ನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆ
ಅದು ಮಧ್ಯ ವರ್ತಿಗಳ ಸೂಪರ ಬೆಲೆ||
ತೊಗರಿಗೆ ಕೊಟ್ಟ ಬೆಂಬಲ ಬೆಲೆ
ರೈತರಿಗೆ ಸಿಗಲಿಲ್ಲ ಸಂತೃಪ್ತ ಬೆಲೆ
ಪರಿಹಾರ ಇಲ್ಲದೆ ರೈತರ ಕಣ್ಣ ನೀರು
ರೈತರು ಬದಕಲು ಆಗಲಿ ಯೋಜನೆ|
ಹೆಸರಿಗೆ ಭೂ ಒಡೆಯ
ಉಸಿರಿಗೂ ಭೂ ಒಡೆಯ
ಹೆಸರು ಉಸಿರು ಉಳಿಸಲು
ಹಾಕಿ ರೈತರಿಗೆ ಸೂಪರ್ ಯೋಜನೆ||
-ಮಹಾಂತೇಶ ಎನ್ ಪಾಟೀಲ, ಕವಿ ಯಾತನೂರ
