ಚಾಮರಾಜನಗರ/ ಗುಂಡ್ಲುಪೇಟೆ :
ಕರ್ನಾಟಕ ಕಾವಲು ಪಡೆಯ ವತಿಯಿಂದ ದಿ. 13/06/2025ರಂದು ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಗ್ರಾಮದ ಬುಡಕಟ್ಟು ಗಿರಿಜನ ಕಾಲೋನಿಯ ಡಾ. ರತ್ನಮ್ಮರವರ ಸಾಮಾಜಿಕ ಸೇವೆ ಹಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನಿರಂತರವಾಗಿ ಸಲ್ಲಿಸುತ್ತಿದ್ದು ಇವರ ಸೇವೆಯನ್ನು ಗುರುತಿಸಿ ವಾಲ್ಮೀಕಿ ಪ್ರಶಸ್ತಿ ಹಾಗೂ ಜಾನಪದ ಸಾರ್ವಭೌಮ ಪ್ರಶಸ್ತಿ ದೊರಕಿದೆ ಇದನ್ನು ಗುರುತಿಸಿ ಕಾವಲು ಪಡೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ ರತ್ನಮ್ಮರವರ ಸಾಮಾಜಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್ ಹಾಗೂ ಗಡಿನಾಡು ವನ್ಯ ಜೀವಿ ಸಂರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಪಿ.ಬಾಲು ಮಾತನಾಡಿ ಕಾವಲು ಪಡೆಯ ನಿರಂತರ ಕಾರ್ಯ ವೈಖರಿಯನ್ನು ಮೆಲುಕು ಹಾಕಿದರು ಇದೇ ವೇಳೆ ತಾಲ್ಲೂಕು ಕಾರ್ಯದರ್ಶಿಗಳಾದ ಎಸ್.ಮುಬಾರಕ್, ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ, ತಾಲ್ಲೂಕು ಸಂಚಾಲಕರಾದ ಕುಂಜುಟ್ಟಿ, ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ, ಟೌನ್ ಯುವಘಟಕದ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್, ಟೌನ್ ಸಂಚಾಲಕರಾದ ಮಿಮಿಕ್ರಿರಾಜು, ಅಬ್ದುಲ್ ರಾಜಿಕ್, ರವಿಕುಮಾರ್, ಬುಡಕಟ್ಟು ಜನಾಂಗದ ಮಹಿಳೆ ಮಾದೇವಮ್ಮ, ರಮೇಶ ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್
