ಸುಳ್ಳು ಪೊಳ್ಳುಗಳನ್ನೇ ಅಸ್ತ್ರವಾಗಿಸಿ
ನಂಬಿಕೆಯ ಮಾತನ್ನು ಮೂಲೆಗಿರಿಸಿ
ದುರಾಸೆ ದುಶ್ಚಟಗಳ ಹೆಗಲಿಗೇರಿಸಿ
ಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ.
ಕೊಟ್ಟ ಮಾತಂತೆ ನಡೆದುಕೊಳ್ಳದೆ
ಭ್ರಷ್ಟ ಮೊಂಡುತನ ಎಂದೂ ಬಿಡದೆ
ಸರಳತೆಯ ಬದುಕಿಗೆ ಒಗ್ಗಿಕೊಳ್ಳದೆ
ಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ.
ನೀಚ ನಾಲಿಗೆಯನ್ನು ಹರಿಬಿಟ್ಟು
ಮಾನ ಮರ್ಯಾದೆಯನ್ನುಸುಟ್ಟು
ಎಲ್ಲವೂ ಇದ್ದು ಮೂರನ್ನೂ ಬಿಟ್ಟು
ಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ.
ಸ್ನೇಹ ಸಂಬಂಧಗಳ ಮರೆತು ಬಿಟ್ಟು
ನ್ಯಾಯ ನೀತಿ ಧರ್ಮವ ಪಣಕ್ಕಿಟ್ಟು
ಅಂಹಕಾರವನ್ನು ಪ್ರದರ್ಶನಕ್ಕೆ ಇಷ್ಟು
ಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ.

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
