ಬೆಂಗಳೂರು : ಹರಿಯಾಣ ರಾಜ್ಯದಲ್ಲಿ ಜರುಗಿದ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಪ್ರಖ್ಯಾತ ಲೇಖಕಿ, ಕಾದಂಬರಿಗಾರ್ತಿ ಹಾಗೂ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿವೃತ್ತ ನಿರ್ದೇಶಕಿ ಶ್ರೀಮತಿ ವೈ ಕೆ ಸಂಧ್ಯಾ ಶರ್ಮ ಹಾಗೂ ಖ್ಯಾತ ರಂಗ ಕರ್ಮಿ ಎಸ್ ವಿ ಕೃಷ್ಣ ಶರ್ಮಾ ಇವರುಗಳ ಮೊಮ್ಮಗ ಚಿ. ಅಧ್ವೀಕ್ ಅಭಿನವ್ ಕೃಷ್ಣ ಎರಡನೇ ಸ್ಥಾನ ಪಡೆದು ಇಟಲಿಯಲ್ಲಿ ಮುಂಬರುವ ದಿನಗಳಲ್ಲಿ ಜರುಗುವ ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್ ಇದರಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿದ್ದಾನೆ.
ಚಿ .ಅಧ್ವೀಕ್ ಅವರ ಸಾಧನೆಗಾಗಿ ಇಂಡಿಯನ್ ದಿವ್ಯಾಂಗ ಎಂಪವರ್ ಮೆಂಟ್ ಅಸೋಸಿಯೇಷನ್ ಇದರ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಅಭಿನಂದಿಸಿದ್ದಾರೆ.
- ಕರುನಾಡ ಕಂದ



















