ಚಾಮರಾಜನಗರ/ ಹನೂರು : ಗುಣಮಟ್ಟದ ಟಿ.ಸಿಗಳನ್ನು ಹೆಚ್ಚುವರಿಯಾಗಿ ಆಳವಡಿಸುವ ಮೂಲಕ ಅಲವೆಡೆ ಜೋತು ಬಿದ್ದಿರುವ ವೈರ್ ಗಳನ್ನು ಸರಿಪಡಿಸಬೇಕು ಮತ್ತು ಐಪಿ ಸೆಟ್ ಗಳಿಗೆ ಹಣ ಕಟ್ಟಿರುವ ರೈತರಿಗೆ ಕೂಡಲೇ ಸೌಲಭ್ಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.
ಪಟ್ಟಣದ ಉಪ ವಿಭಾಗ ಚೆಸ್ಕಾಂ ಕಛೇರಿ ಆವರಣ ಕೊಳ್ಳೇಗಾಲ ವಿಭಾಗದ ಅಧೀಕ್ಷಕ ಇಂಜಿನಿಯರ್ ತಬಸ್ಸುಮ್ ಅಫ್ಸಾಭಾನು ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ರೈತ ಮುಖಂಡರು ಮಾತಾಡಿ ಗುಣ ಮಟ್ಟದ ಟಿಸಿಗಳನ್ನು ನೀಡುವ ನಿಟ್ಟಿನಲ್ಲಿ ಸಮರ್ಪಕ ನಿರ್ವಹಣೆ ಆಗಬೇಕು, ನಿಗಧಿತ ಸಮಯದಲ್ಲಿ ಉತ್ತಮ ಸರ್ವಿಸ್ ಆಗಬೇಕು. ಲೈನ್ ಮ್ಯಾನ್ ಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ತಿಳಿಸಬೇಕು ಎಂದರು.
ಎಇಇ ರಂಗಸ್ವಾಮಿ ಮಾತಾಡಿ ಕಳೆದ ಸಭೆಯಲ್ಲಿ ರೈತರಿಂದ ಬಂದಿದ್ದ ಸಮಸ್ಯೆಗಳ ದೂರುಗಳನ್ನು ಕ್ರಮ ವಹಿಸಿರುವ ಬಗ್ಗೆ ಸಭೆಯಲ್ಲಿ ಓದಿ ತಿಳಿಸಿದರು. ಅಲ್ಲದೆ ಈ ಬಾರಿ 22 ದೂರುಗಳು ಬಂದಿದ್ದು ನಿಗದಿತ ಅವಧಿಯೊಳಗೆ ಬಂದಿರುವ ವಿವಿಧ ದೂರುಗಳ ಸಮಸ್ಯೆಗಳನ್ನು ಬಗೆಹರಿಸಲು ತುರ್ತಾಗಿ ಕ್ರಮ ವಹಿಸಲಾಗುವುದು ಎಂದರು
ಕೊಳ್ಳೇಗಾಲ ಇಇ ತಬಸ್ಸುಮ್ ಅಫ್ಸಾಭಾನು ಮಾತನಾಡಿ ಈ ಭಾಗದಲ್ಲಿ ಲೈನ್ ಡ್ಯಾಮೇಜ್ಗಳು ಶೇಕಡ 90ರಷ್ಟು ಕೆಲಸ ಮುಗಿದಿದೆ. ಎಲ್ಲ ಕಡೆ ಹೆಚ್ಚುವರಿ ಟಿಸಿಗಳಿಗೆ ರೈತರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಕೆಲವು ರೈತರು ಜಮೀನಿನ ಮಧ್ಯ ಭಾಗದಲ್ಲಿ ಲೈನ್ಗಳು ಹೋಗಿರುವ ಬಗ್ಗೆ ದೂರುಗಳು ನೀಡಿದ್ದಾರೆ. ಕೆಲವು ಕಡೇಗಳಲ್ಲಿ ಕಂಬಗಳಿಗೆ ಗಿಡಗಳು ಸುತ್ತುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ದೂರುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಎಂದರು
ಹನೂರು ಭಾಗದ ಬಹುತೇಕ ಗ್ರಾಮಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ವಿದ್ಯುತ್ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಹಕಾರ ಪಡೆದು ಸರ್ಕಾರ ಮಟ್ಟದಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದು ಆಲಂಬಾಡಿ ಮಾರಿಕೋಟೆ ಜಂಬೂಪಟ್ಟಿ ಇನ್ನಿತರ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೇ ಸಾಮಗ್ರಿ ಖರೀದಿ ಮಾಡಲಾಗಿದೆ ಅರಣ್ಯ ಇಲಾಖೆಯ ತೊಡಗಿನಿಂದ ಕೆಲಸ ವಿಳಂಬವಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು
ಇದೆ ವೇಳೆ ರಾಮಪುರ ಭಾಗದಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಟರಾಜು ಎನ್ನುವವರ ವಿರುದ್ಧ ಹಲವಾರು ರೈತ ಮುಖಂಡರು ಅವರ ನಡವಳಿಕೆ ಬಗ್ಗೆ ಅಸಮರ್ಪಕ ಮಾತುಗಳನ್ನು ಆಡಿ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿ ಎಎ ತಬಸ್ಸುಮ್ ಅಫ್ಸಾಭಾನು ರವರು ಕಳೆದ ಸಭೆಯಲ್ಲೂ ನಟರಾಜು ಲೈನ್ ಮ್ಯಾನ್ ವಿರುದ್ದ ರೈತರಿಂದ ಅಪಸ್ವರ ಕೇಳಿಬಂದಿತ್ತು ಹಾಗಾಗಿ ಈ ಕೂಡಲೇ ಅವರನ್ನು ಬದಲಾಯಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಎಇಇ ಬಿ. ರಂಗಸ್ವಾಮಿ ಜೆಇಗಳಾದ ಎಂ.ಮಹೇಶ್ ವೆಂಕಟೇಶ್ ನಾಯ್ಡು ಮಹದೇವಸ್ವಾಮಿ ಹೆಚ್.ಮಾದೇಶ ರಘುನಂದನ್ ವೆಂಕಟೇಶ್ ಮೂರ್ತಿ ಮತ್ತು ರೈತ ಮುಖಂಡರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್



















