ಕಲಬುರಗಿ: ಜನಸೇವಕರೆಂದು ಜನರಿಂದಲೇ ಆಯ್ಕೆಯಾಗಿ ಅಧಿಕಾರಕ್ಕೇರುವ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಾನುಧಾನವನ್ನು ನಿರ್ಧರಿಸಿಕೊಂಡಿರುವರು ಅಧಿಕಾರ ಇರುವವರೆಗೆ ತಮ್ಮ ದಿನನಿತ್ಯ ಕುಟುಂಬ ಜೀವನದ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುವ, ಮಾಸಿಕ ಸಂಬಳ ಮತ್ತು ಪಿಂಚಣಿ ಯಾವುದೇ ವಿರೋಧವಿಲ್ಲದೆ ನಿರ್ಧರಿಸಿಕೊಂಡು ಕಾಲ ಕಾಲಕ್ಕೆ ಹೆಚ್ಚು ಮಾಡಿಕೊಳ್ಳುತ್ತಾ ಬರುತ್ತಿರುವುದು ರೂಢಿಯಾಗಿದೆ.
ಲೋಕಸಭೆ ಸದ್ಯಸರು, ಶಾಸಕರಂತೆ ಸ್ಥಳೀಯ ಸರ್ಕಾರಗಳ ಜನಪ್ರತಿನಿಧಿಗಳಾಗಿರುವ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ಮಹಾನಗರಸಭೆ, ಪುರಸಭೆ ಪಟ್ಟಣಪಂಚಾಯತ್, ಸದಸ್ಯರುಗಳಿಗೆ ಪಿಂಚಣಿಯ ಸೌಲಭ್ಯ ಏಕಿಲ್ಲ? ಎಲ್ಲರೂ ಜನರಿಂದಲೇ 5 ವರ್ಷಕೊಮ್ಮೆ ಚುನಾವಣೆಯಲ್ಲಿ ಆಯ್ಕೆಯಾಗಿ ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸ ಮಾಡುವವರೇ ಆಗಿರುತ್ತಾರೆ ಅಂದ ಮೇಲೆ ತಾರತಮ್ಯವೇಕೆ…? ಇದು ಅನ್ಯಾಯವೇ… ಆಗಿರುವುದರಿಂದ ಪಿಂಚಣಿಯ ಸೌಲಭ್ಯ ಎಲ್ಲಾ ಸದ್ಯಸರಿಗಳಿಗೂ ದೊರೆಯಬೇಕು ಎಂದು ಭೀಮಾ ಮಿಷನ್ ಅಧ್ಯಕ್ಷರಾದ ಭೀಮಶೆಟ್ಟಿ ಮುಕ್ಕಾ ಇವರು ಆಗ್ರಹಿಸಿದ್ದಾರೆ.
ವರದಿ ಜಗದೀಶ್ ಕುಮಾರ್ ಭೂಮಾ



















