ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಯೆಯ ಕೊರತೆಯಿಂದ ಮಾನವೀಯತೆ ದೂರ

ಬಳ್ಳಾರಿ / ಕಂಪ್ಲಿ : ಆಧುನಿಕ ಜೀವನ ಶೈಲಿಂದಾಗಿ ನೈತಿಕತೆ ಕಣ್ಮರೆಯಾಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಸುನಿಲ್ ಮಾಲಿ ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅನುಭವ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 179ನೇ ಮಹಾಮನೆ ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ನೈತಿಕತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು ಮನೆಯಲ್ಲಿ ನೈತಿಕತೆ ಸಂಸ್ಕಾರ ಆಚಾರ ವಿಚಾರ ಸಂಸ್ಕೃತಿ ಕಲಿಯದ ಮಕ್ಕಳನ್ನು ಹೆದರಿಸಲು ತಂದೆ, ತಾಯಿ, ಪೋಷಕರು ಹಾಗೂ ಶಾಲೆ ಶಿಕ್ಷಕರು ಆಯುಧದಂತಾಗಿರುವುದು ವಿಪರ್ಯಾಸ. ಪ್ರಸ್ತುತ ದಿನಮಾನಗಳಲ್ಲಿ ಭಕ್ತಿ ಎಂಬುದು ಬಂಡವಾಳದ ವ್ಯವಹಾರವಾಗಿದೆ ಜಗತ್ತಿನಲ್ಲಿ ದಯೆ ದೂರವಾಗಿ ಮಾನವೀಯತೆ ಕುಂಠಿತಗೊಂಡಿದೆ ಇದರಿಂದಾಗಿ ಯುದ್ಧಗಳು ನಡೆಯುತ್ತಿವೆ ಎಂದು ತಿಳಿಸಿದರು.
ಸಂಗಾತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘನಮಠದಯ್ಯ ಹಿರೇಮಠ್ ಮಾತನಾಡಿ ತಂದೆ, ತಾಯಿ, ಗುರು, ಹಿರಿಯರ ಮಾತನ್ನು ಪಾಲಿಸಿದರೆ ಮಾತ್ರ ಸಂಸ್ಕಾರವಂತನಾಗಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಪರಿಷತ್ ನ ತಾಲೂಕು ಅಧ್ಯಕ್ಷ ಜಿ. ಪ್ರಕಾಶ ಮಾತನಾಡಿ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಉಪನ್ಯಾಸ ಕಾರ್ಯಕ್ರಮವನ್ನು ತಮ್ಮ ಮನೆಗಳಲ್ಲಿ ಯಾರಾದರೂ ಆಸಕ್ತಿ ವಹಿಸಿದರೆ ಅಲ್ಲಿ ಬಂದು ಉಪನ್ಯಾಸವನ್ನು ಏರ್ಪಡಿಸಿ ಶರಣರ ವಚನಗಳ ಹಾಗೂ ವಚನಕಾರ್ತಿಯರ ಬಗ್ಗೆ ತಿಳಿಸಿ ಕೊಡಲಾಗುವುದು ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷ ಮುಕುಂದ ಶಿವಗಂಗಮ್ಮ, ವಿಜಯನಗರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಕೆ. ವಿಷ್ಣು ವೇದಿಕೆ ಮೇಲಿದ್ದು ಮಾತನಾಡಿದರು,
ಈ ಸಂದರ್ಭದಲ್ಲಿ ಶರಣರಾದ ಅಶೋಕ ಕುಕುನೂರು, ಎಚ್ ನಾಗರಾಜ, ಬಿ.ಎಂ. ರುದ್ರಯ್ಯ, ಎಸ್. ಶಾಮಸುಂದರಾವ, ಬಿ.ಎಂ. ಪುಷ್ಪ, ಕಲ್ಗುಡಿ ನಾಗರತ್ನ, ಸಂತೋಷ್ ಕೊಟ್ರಪ್ಪ ಸೋಗಿ, ಮಡಿವಾಳರ ಹುಲಗಪ್ಪ, ಬಡಿಗೇರ್ ಜಿಲಾನಸಾಬ್, ಸಜ್ಜೆದ ವೀರಭದ್ರಪ್ಪ, ಕೆ. ಯಂಕಾರೆಡ್ಡಿ, ಉಗಾದಿ ಬಸವರಾಜ, ಚಂದ್ರಯ ಸೊಪ್ಪಿನ ಮಠ, ಸಂಗಮೇಶ್ ಕಂದಕೂರು ಸೇರಿದಂತೆ ಪಾಠಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಡಾಕ್ಟರ್ ಕೆ. ಸುನಿಲ್ ವಂದಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!