ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿರುವ ಹಂಪಿ ಗುರುಕುಲ ಸರ್ಕಾರಿ ತೆಲುಗು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯಗುರು ರಾಘವೇಂದ್ರ ಇವರನ್ನು ಅದ್ಧೂರಿಯಾಗಿ ಸನ್ಮಾನಿಸಿ ಸೋಮವಾರ ಬೀಳ್ಕೊಡಲಾಯಿತು.
ನಂತರ ಸನ್ಮಾನ ಸ್ವೀಕರಿಸಿ ರಾಘವೇಂದ್ರ ಅವರು ಮಾತನಾಡಿ, ಇಲ್ಲಿನ ತೆಲುಗು ಶಾಲೆಯಲ್ಲಿ ಸತತ 31 ವರ್ಷ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲಾಯಿತು. ಅನೇಕ ಏಳುಬೀಳುಗಳ ನಡುವೆ ಶಾಲೆಯನ್ನು ಮುನ್ನೆಡಿಸಿ, ಈಗ ವಯೋ ನಿವೃತ್ತಿ ಹೊಂದಿರುವೆ. ಪ್ರತಿಯೊಬ್ಬರ ಸಹಕಾರದಿಂದ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು.
ನಂತರ ನಿವೃತ್ತಿ ಹೊಂದಿದ ರಾಘವೇಂದ್ರ ಹಾಗೂ ಅವರ ಧರ್ಮಪತ್ನಿ ಸುಜಾತ ಇವರಿಗೆ ಶಿಕ್ಷಕ ವೃಂದದವರು ಸನ್ಮಾನಿಸಿ ಗೌರವಿಸಿ, ಮುಂದಿನ ವಯೋ ನಿವೃತ್ತಿ ಬದುಕು ಸುಮಧುರವಾಗಿರಲೆಂದು ಹಾರೈಯಿಸಿದರು.
ಈ ಸಂದರ್ಭದಲ್ಲಿ ಇಸಿಒ ರೇವಣ್ಣ, ಸಿಆರ್ಪಿಗಳಾದ ರೇಣುಕಾರಾಧ್ಯ, ಭೂಮೇಶ್ವರ, ಹಾಗೂ ಮಹಾಭಲೇಶ್ವರಗೌಡ, ಜಗನ್ನಾಥ, ಮಲ್ಲಿಕಾರ್ಜುನ, ಮುರಳಿಧರ್, ಸುಬ್ಬಾರಾವ್, ಹುಲಿಕುಂಟಾಚಾರ್, ಮಂಜುನಾಥ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















