ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಹೊಸ ಕಟ್ಟಡವನ್ನು ಒಂದು ವರ್ಷದ ಹಿಂದೆ ಕೋಟ್ಯಾಂತರ ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಈಗ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಕೊಳೆತು ಹುಳಗಳಿಂದ ತುಂಬಿ ಗಬ್ಬೆದ್ದು ನಾರುತ್ತಿದೆ ಆ ಬಸ್ ನಿಲ್ದಾಣಕ್ಕೆ ಹೋದವರೆಲ್ಲರೂ ವಾಂತಿ ಮಾಡಿಕೊಳ್ಳುತ್ತಾ, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ನಮಗೇನೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಕರ್ಚೀಫ್ ಮೂಗಿಗೆ ಒತ್ತಿಕೊಂಡು ಅಡ್ಡಾಡುತ್ತಿದ್ದಾರೆ ಹೀಗಿದ್ದಾಗ ಹತ್ತು ಹಲವು ರೋಗಗಳಿಗೆ ತಾಣವೇ ಈ ಯರಗಟ್ಟಿ ಬಸ್ ನಿಲ್ದಾಣ ಎಂದರೂ ಅಡ್ಡಿ ಇಲ್ಲ.
ವರದಿ ಮಂಜು.ಎಮ್ . ಚಿಕ್ಕಣ್ಣವರ



















