
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಜರುಗಿತು. ಹಿಂದಿನ ಉಪಾಧ್ಯಕ್ಷರಾದ ಭೀಮಾಶಂಕರ್ ಆಳೂರ ಇವರು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. 18 ಸದಸ್ಯರನ್ನು ಒಳಗೊಂಡ ಈ ಗ್ರಾಮ ಪಂಚಾಯಿತಿಗೆ ಕಾಶೀನಾಥ್ ಮಾನೆ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ 18 ಸದಸ್ಯರಲ್ಲಿ 14 ಸದಸ್ಯರು ಹಾಜರಿದ್ದರು. ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸದಸ್ಯ ಕಾಶಿನಾಥ್ ಮಾನೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ತಹಶೀಲ್ದಾರ್ ವಿಜಯಕುಮಾರ್ ಕಡಕಬಾವಿ ಅವರು ಕಾಶಿನಾಥ್ ಮಾನೆ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೂಬಾಯಿ ದತ್ತು ಬಡಿಗೇರ್,
ಮಾಜಿ ಉಪಾಧ್ಯಕ್ಷರಾದ ಭೀಮಾ ಶಂಕರ್ ಆಳೂರ, ವಿಠಲ ಗೌಡ ಪಾಟೀಲ್,
ಪಂಡಿತ್ ಶಿಂಧೆ,
ವಿಶ್ವನಾಥ ಕೌಲಗಿ,
ವಿಲಾಸ್ ಅಂದೇವಾಡಿ,
ಚೆನ್ನಪ್ಪ ವಾಗ್ದುರಗಿ,
ಶಾಹಿದ್ ಮುಲ್ಲಾ,
ಸವಿತಾ ಸಾವಳಗಿ,
ಮಾಜಿ ಗ್ರಾ.ಪಂ ಅಧ್ಯಕ್ಷ ರೇಣುಕಾ ಖಂಡೆಕಾರ್ , ನಜಮೀನ ಮುಜಾವರ್,
ಕಮಲಾಭಾಯಿ ರಾಠೋಡ್,
ಕಲಾವತಿ ಮೇಲಿನಕೇರಿ,
ಹಾಗೂ ಗ್ರಾಮದ ಮುಖಂಡರಾದ ಹಣಮಂತ ಖಂಡೇಕಾರ, ಅಣ್ಣಾರಾಯ ಬಿದರ ಕೋಟಿ, ಮಲ್ಲಣ್ಣ ತೋಳನೂರ್, ಶಿವಾನಂದ ಗೌಡ ಬಿರಾದಾರ್, ಧರ್ಮಣ್ಣ ಕ್ಷತ್ರಿ, ಸಿದ್ದಪ್ಪ ವಾಗ್ದುರ್ಗಿ, ಸಿದ್ದಪ್ಪ ಪೂಜಾರಿ, ಕಾಮಣ್ಣ ಕ್ಷತ್ರಿ, ಸುರೇಶ್ ಬಿರಾದಾರ್, ಪರಮೇಶ್ವರ್ ಸಾವಳೆ, ನಾಗಪ್ಪ ನಾಡಗೌಡ, ರವಿ ಬಂಡಗಾರ, ನಿಂಗಪ್ಪ ತೋಳನೂರ, ತುಳಜಾ ರಾಮ ಮೀನುಗಾರ, ಬಸವರಾಜ್ ಬಿಲ್ಲಾಡಿ, ಗಣಪತಿ ನಾಯಕೋಡಿ, ಸೋಮಣ್ಣ ರೂಗಿ, ಅಶೋಕ್ ಕಂಡೆ ಕಾರ್, ಶ್ರೀಶೈಲ ಸಾವಳಗಿ, ಮಲ್ಲುಗೌಡ ಪಾಟೀಲ್, ಸುಖದೇವ್ ಮೇಲಿನಮನಿ, ಶಿವಪ್ಪ ಸಾವಳೇ, ತುಕಾರಾಂ ಮಾನೆ, ಚಂದು ಬಡಿಗೇರ್,
ಪಿಡಿಓ ಸಂಗೀತಾ ಬಗಲಿ, ಸಹಾಯಕ ಚುನಾವಣಾಧಿಕಾರಿ ರಾಜು ಮೂಗಿ, ಕೇಸ್ ವರ್ಕರ್ ಮುತ್ತಣ್ಣ ಕಳಸದ್, ಗ್ರಾಮ ಲೆಕ್ಕಾಧಿಕಾರಿಯಾದ ಪ್ರಕಾಶ್ ಚವಡಿಹಾಳ ಗ್ರಾ. ಪಂ. ಕಾರ್ಯದರ್ಶಿ ಬಸವರಾಜ್ ಅವರಾದಿ, ಬಸವರಾಜ್ ವಾಗ್ಮೊರೆ, ನಿಂಗನಗೌಡ ಬಿರಾದಾರ್, ದಯಾನಂದ ಐರೊಡಗಿ, ರಾಜಕುಮಾರ್ ರಾಠೋಡ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಮತ್ತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಯವರು ಸೇರಿದಂತೆ ಹಲವು ಮುಖಂಡರಿದ್ದರು.
ವರದಿ ಮನೋಜ್ ನಿಂಬಾಳ



















