ಮಾತಿನಮನೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಕವಿ ಶ್ರೀ ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಸ್ಮರಣೆಯಲ್ಲಿ “ಇಷ್ಟುಕಾಲ ಒಟ್ಟಿಗಿದ್ದು” ಭಾವನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್.ಎಸ್.ವಿ ಯವರ ರಚನೆಯ ಗೀತೆಗಳನ್ನು ದೀಪಾ ರಾಘವೇಂದ್ರ, ಕಾವ್ಯಶ್ರೀ ಭಾವೆ ಹಾಗೂ ಶ್ರೀನಿಧಿಯವರು ಸುಶ್ರಾವ್ಯವಾಗಿ ಹಾಡಿದರು.
ಮುಖ್ಯ ಅತಿಥಿಗಳಾಗಿದ್ದ ಚಲನಚಿತ್ರ ನಿರ್ದೇಶಕ ಶ್ರೀನಿವಾಸ್ ಕೌಶಿಕ್ ಮಾತನಾಡಿ ಇಂತಹ ಮೇರು ಕವಿಗಳು ಹಾಗೂ ಅವರ ಕೃತಿಗಳನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕಾರ್ಯ ಆಗಬೇಕಿದೆ ಎಂದು ಹೇಳಿದರು. ಪ್ರಾಸ್ತಾವಿಕ ನುಡಿಗಳಲ್ಲಿ ಮಾತಿನ ಮನೆಯ ರಾ ಸು ವೆಂಕಟೇಶ ಮಾತಿನ ಮನೆಯ ಬಗ್ಗೆ ಹಾಗೂ ಭಾವಗೀತೆಗಳ ಕವಿ ವೆಂಕಟೇಶ ಮೂರ್ತಿಯವರ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮೂವರು ಗಾಯಕರನ್ನು ಗೌರವಿಸಲಾಯಿತು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ಶೈಲಸುತೆ ರಂಜಿತಾ ನಿರ್ವಹಿಸಿದದರು.
ವರದಿ ಕೊಡಕ್ಕಲ್ ಶಿವಪ್ರಸಾದ್



















