ಬಳ್ಳಾರಿ/ ಕಂಪ್ಲಿ : ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಪತ್ರಿಕಾ ವಿತರಕರು ಹಾಗೂ ಪ್ರತಿನಿಧಿಗಳು ಮಂಗಳವಾರ ಪತ್ರಿಕಾ ದಿನಾಚರಣೆ ಆಚರಿಸಿದರು.
ಬಳಿಕ ಪತ್ರಿಕಾ ವಿತರಕರಿಗೆ ದ್ವಿಚಕ್ರ ವಾಹನ ಅಗತ್ಯ ಸುರಕ್ಷಾ ಸಾಧನಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಗೆ ಮನವಿ ಸಲ್ಲಿಸಿದರು.
ಪತ್ರಿಕಾ ವಿತರಕ ಮಳೆಕಾರ ಭರತ್ ಕುಮಾರ ಮಾತನಾಡಿ ಪತ್ರಿಕ ವಿತರಕರು ಬಡವರಾಗಿದ್ದು ಸಂಕಷ್ಟದಲ್ಲಿದ್ದಾರೆ, ಸರಕಾರದಿಂದ ಯಾವ ಸೌಲಭ್ಯಗಳು ದೊರೆಯುತ್ತಿಲ್ಲ ಪುರಸಭೆಯಿಂದ ಪಟ್ಟಣದ ಪತ್ರಿಕ ವಿತರಕರಿಗೆ ದ್ವಿಚಕ್ರ ವಾಹನ, ಅಗತ್ಯ ಸಲಕರಣೆಗಳು ನಿವೇಶನ ವಸತಿ ಸೌಲಭ್ಯ ಕಲ್ಪಿಸಿ ಕೊಡುವಂತೆ ಆಗ್ರಹಿಸಿದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ ಪತ್ರಿಕ ವಿತರಕರು ಸಲ್ಲಿಸಿದ ಮನವಿ ಕುರಿತು ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಪುರಸಭಾ ಸದಸ್ಯ ಟಿವಿ ಸುದರ್ಶನ್ ರೆಡ್ಡಿ ಪತ್ರಿಕಾ ವಿತರಕರಾದ ವೈ. ಬಿ. ಆನಂದ ರಾವ, ಸಂತೋಷ್ ಎಂ, ಲಕ್ಷ್ಮಣ್, ಧನಂಜಯ, ಹನುಮೇಶ, ಎನ್. ಶಶಿಧರ ಇತರಿದ್ದರು
ವರದಿ : ಜಿಲಾನಸಾಬ್ ಬಡಿಗೇರ್



















