
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತರಾದ ಶ್ರೀ ದಯಾನಂದ್ ಅವರ ಜಮೀನಿನಲ್ಲಿ ಮಾನ್ಯ ಕೃಷಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ವೆಂಕಟೇಶ್,ಶಾಸಕ ಎಂ.ಆರ್ ಮಂಜುನಾಥ್ ಅವರ ನೇತೃತ್ವದಲ್ಲಿ ರಾಗಿ ಬಿತ್ತನೆ ಮಾಡುವ ಮೂಲಕ ಬಿತ್ತನೆ ಬೀಜ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಂತರ ಇದೇ ಸಮಯದಲ್ಲಿ, ಕೃಷಿ ಇಲಾಖೆಯ ಸಹಾಯಧನದ ಅಡಿಯಲ್ಲಿ ನೀಡಲಾಗುವ ಕೃಷಿ ಯಂತ್ರೋಪಕರಣಗಳನ್ನು ಫಲಾನುಭವಿ ರೈತರಿಗೆ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಸಚಿವರು ರೈತರು ವೈಜ್ಞಾನಿಕವಾಗಿ ಕೃಷಿ ಮಾಡಬೇಕು ಹಾಗೆಯೇ ಮಿಶ್ರಬೆಳೆ ಬಾಳೆ ತೆಂಗು ಜೊತೆ ಜೊತೆಗೆ ತರಕಾರಿ ಹಣ್ಣು ಹಂಪಲು ಒಂದು ಕೃಷಿ ಜಮೀನಿನಲ್ಲಿ 4 ಭಾಗ ಮಾಡಿಕೊಂಡು ವಿಧ ವಿಧವಾದ ಬೆಳೆಯನ್ನು ಬೆಳೆಯಬೇಕು ವ್ಯವಸಾಯದ ಜೊತೆ ಜೊತೆಗೆ ಹೈನುಗಾರಿಕೆ ಕುರಿ ಕೋಳಿ ಸಾಕಣೆ ಮಾಡಿ ರೈತರು ಆರ್ಥಿಕವಾಗಿ ಮುಂದೇಬರಬೇಕು ಸ್ವಾಲಂಬಿ ಜೀವನ ನಡೆಸಿಕೊಂಡು ಬದುಕಬೇಕು ಎಂದು ನೆರೆದಿದ್ದ ರೈತರಿಗೆ ಕಿವಿ ಮಾತು ಹೇಳಿದರು. ನಂತರ ಮಾತನಾಡಿದ ಅವರು ಮಳೆ ನೀರು ಶೇಖರಣೆ ಹಾಗೂ ಸಂಗ್ರಹ ಮಾಡಿಕೊಳ್ಳುವುದರ ಬಗ್ಗೆ ಮಾತನಾಡಿ ನಂತರ ರೈತರ ವಿವಿಧ ಪ್ರಶ್ನೆಗಳಿಗೆ ಉತ್ತರ ಕೊಟ್ಟರು.
ನಂತರ ಹನೂರು ವಿಧಾನಸಭಾ ಶಾಸಕರದ ಎಂ ಆರ್ ಮಂಜುನಾಥ್ ಮಾತನಾಡಿ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ ಅವರು ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತ ರೈತರ ಪರವಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ,ಇಂದು ನಮ್ಮ ಹನೂರು ತಾಲೂಕಿಗೆ ಬಂದಿರುವುವುದು ನಮ್ಮ ಪುಣ್ಯ ,ಹನೂರು ಕ್ಷೇತ್ರದ ರೈತರು ಹೆಚ್ಚಾಗಿ ಹೈನುಗಾರಿಕೆಗೆ ಅವಲಂಬಿತವಾಗಿದ್ದರೆ. ನಮ್ಮ ಕ್ಷೇತ್ರದಲ್ಲಿ ಕಳೆದ ವರ್ಷ 60 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು ಪ್ರಸ್ತುತ 90 ಸಾವಿರ ಲೀಟರ್ ಹಾಲುಉತ್ಪಾದನೆ ಮಾಡುತ್ತಿದ್ದಾರೆ.
ಹಾಗೆಯೇ ನಮ್ಮ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು ಇಲ್ಲಿ ನೀರು ವಿದ್ಯುತ್ ಸಮರ್ಪಕವಾಗಿ ದೊರೆತರೆ ರೈತರು ಚಿನ್ನದಂತ ಬದುಕು ನಡೆಸಬಹುದು ನಮ್ಮ ಹನೂರು ಭಾಗದ ರೈತರು ಶ್ರಮ ಜೀವಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ನದಿ ಮೂಲದಿಂದ ನೀರಿನ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಸಿಇಓ ಮೋನಾ ರೂತ್, ಎಸ್ ಪಿ ಕವಿತಾ, ಕಾಡಾ ಅಧ್ಯಕ್ಷರಾದ ಮರಿಸ್ವಾಮಿ, ದಯಾನಂದ್ ಹಾಗೂ ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಭಾಗದ ಅಧಿಕಾರಿಗಳು ಹಾಗೂ ವಿವಿಧ ಸಂಘದ ರೈತ ಮುಖಂಡರು ರೈತರು ಸ್ಥಳೀಯರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್



















