
ಬೆಳಗಾವಿ|| ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹತ್ತಿರ ಸಿದ್ದಾಪುರ ವಾಡಿ ಗ್ರಾಮದಲ್ಲಿ ದಿನಾಂಕ 04/07/2025 ರಂದು ಭೀಮ ಘರ್ಜನೆ ಯುವರಾಜ ಬಣ ಸಂಘಟನೆ ವತಿಯಿಂದ ರಾಜ್ಯಮಟ್ಟದ ಹಿಂದುಳಿದ ಅಲ್ಪಸಂಖ್ಯಾತರ ಜಾಗೃತಿ ಸಲಹಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಂತೆ ಧಮ್ಮ ದ್ವೀಪ ಬುದ್ಧ ಗಯಾ ಬಿಹಾರ ಇವರು ವಹಿಸಿಕೊಂಡಿದ್ದರು. ಅದರಂತೆ ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ|| ನಾಗಲಕ್ಷ್ಮಿ ಚೌದರಿ ವಹಿಸಿಕೊಂಡಿದ್ದರು.
ಅಧ್ಯಕ್ಷತೆಯನ್ನು ಭೀಮ ಘರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಯುವರಾಜ ಕಾಂಬಳೆ ವಹಿಸಿಕೊಂಡಿದ್ದರು.
ಇದೇ ವೇಳೆ ಅಥಣಿ ತಾಲೂಕಿನ ಮಹಿಳಾ ಕಾಂಗ್ರೆಸ್ಸಿನ ಮುಖಂಡರುಗಳಾದ ಶಿಲ್ಪ ತೊದಲಬಾಗಿ ಇವರ ನೇತೃತ್ವದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರಿಗೆ ಸೀರೆ, ಬಳೆ ,ಹೂವು ,ಕುಂಕುಮ ಇಟ್ಟು, ಶಾಲನ್ನು ಹೊದಿಸಿ ಸನ್ಮಾನಿಸಿದರು. ಇವರ ಜೊತೆ ವನಿತಾ ಖೋಕಾಟೆ, ಕಲಾವತಿ ಕಿತ್ತೂರ, ವಂದನಾ ಗೋಟಗಿಂಡಿ, ರೇಖಾ ಕರೋಲಿ, ಸಂಗೀತ ಬಾಸಿಂಗೆ ಇವರು ಈ ಸತ್ಕಾರದಲ್ಲಿ ಭಾಗವಹಿಸಿದ್ದರು.
ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣವು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರು ಹೇಳಿದರು ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಕಲಿಯಬೇಕು ಶಿಕ್ಷಣದಿಂದ ವಂಚಿತರಾಗಬಾರದು ಶಿಕ್ಷಣ ಎಂದರೆ ಅರಿವು ಎಂದು ಹೇಳಿದರು.
ಇದೆ ವೇಳೆ ಮಹಿಳೆಯರ ಕುಂದು ಕೊರತೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಅಧಿಕಾರಿಗಳನ್ನು ಅಲ್ಲಿಯೇ ಕರೆಸಿ ಸಮಸ್ಯೆಗಳಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಮಾರಂಭದಲ್ಲಿ ಭೀಮ ಘರ್ಜನೆ ರಾಜ್ಯ ಗೌರವ ಅಧ್ಯಕ್ಷರಾದ ದೇವರಾಜ್ ಕಾಂಬ್ಳೆ , ಭೀಮ ಘರ್ಜನೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಚಿನ್ ಕಾಂಬಳೆ, ಬೆಳಗಾವಿ ಜಿಲ್ಲಾ ಸಂಚಾಲಕರಾದ ಖೋಕಾಟೆ, ಅಥಣಿಯ ಯುವ ಘಟಕದ ತಾಲೂಕ ಅಧ್ಯಕ್ಷರಾದ ಕುಶಪ್ಪ ಬನಸೋಡೆ, ರಾಜ್ಯ ಸಂಚಾಲಕರಾದ ಬೈರು ಕಾಂಬಳೆ, ಉತ್ತರ ಕರ್ನಾಟಕ ಅಧ್ಯಕ್ಷರಾದ ಮಹಾಂತೇಶ್ ಕಾಂಬಳೆ, ಇನ್ನೂ ಅನೇಕ ಭೀಮ ಗರ್ಜನೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಅದಲ್ಲದೆ ಚಿಕ್ಕೋಡಿಯ ಉಪವಿಭಾಗಾಧಿಕಾರಿ ಸಂತೋಷ್ ಸಂಪಗಾವಿ, ಚಿಕ್ಕೋಡಿಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕೆ ಎಸ್ ವನ್ನೂರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಅರ್ಚನಾ ಸಾನೆ, ಅಂಕಲಿಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ ಭಂಡಾರಿ ಸೇರಿದಂತೆ ಚಿಕ್ಕೋಡಿಯ ಎಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ ಅಥಣಿ



















