ಬೆಳಗಾವಿ|| ಅಥಣಿ ತಾಲೂಕಿನ ಮುರುಗುಂಡಿ ಸಮೀಪದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಕಾರ್ ನಡುವೆ ಭೀಕರ ಅಪಘಾತವಾಗಿದೆ. ಈ ಅಪಘಾತದಲ್ಲಿ
ಈ ಮೂರು ಜನರು ಉಸಿರು ಚೆಲ್ಲಿದ್ದಾರೆ ಮತ್ತು ಇನ್ನೂ ಎರಡು ಜನರ ಗಂಭೀರ ಗಾಯಗೊಂಡು ಅವರ ಸ್ಥಿತಿ ಚಿಂತಾಜನಕವಾಗಿದೆ .
ಕಾರು ಬಸ್ ಮುಖಾಮುಖಿ ಡಿಕ್ಕಿಯಾಗಿವೆ ಡಿಕ್ಕಿಯಾದ ರಭಸಕ್ಕೆ ಕಾರು ನುಚ್ಚುನೂರಾಗಿದೆ ಮೂವರು ಜನ ಉಸಿರು ಚೆಲ್ಲಿದ್ದಾರೆ ಇನ್ನು ಉಳಿದ ಇಬ್ಬರು ಗಾಯಾಳುಗಳನ್ನು ಅಥಣಿಯ ಸ್ಥಳೀಯ ಆಸ್ಪತ್ರೆಗೆ ದಾಖಿಸಲಾಗಿದೆ.
ಮೃತರು ಕಲ್ಬುರ್ಗಿ ಜಿಲ್ಲೆಯವರು ಎಂದು ತಿಳಿದುಬಂದಿದೆ.
ಈ ಘಟನೆಯು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .
ವರದಿ. ವಿಠ್ಠಲ ಖೋಕಾಟೆ ಅಥಣಿ



















