ಕುಡಹಳ್ಳಿ ಗ್ರಾಮದಲ್ಲಿ ಸುಮಾರು 4-5 ವರ್ಷದಿಂದ ಹಾಳು ಬಿದ್ದ ಅಂಗನವಾಡಿ ಕಟ್ಟಡ ತುಂಬಾ ಆತಂಕ ಪಡುತ್ತಿರುವ ಮಕ್ಕಳು ಹಾಗೂ ಗ್ರಾಮಸ್ಥರು.
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಡಹಳ್ಳಿ ಗ್ರಾಮದ ಹರಿಜನ ಓಣಿಯಲ್ಲಿ ಅಂಗನವಾಡಿ ಕೇಂದ್ರ ವಿದ್ದು ಸುಮಾರು 4-5ವರ್ಷಗಳ ಹಿಂದೆ ಸ್ವಲ್ಪ ಕಟ್ಟಡ ಬೀಳುವ ಪರಿಸ್ಥಿತಿ ಇದ್ದ ಕಾರಣ ಬೇರೆ ಕಡೆ ಬಾಡಿಗೆಯಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದಾರೆ. 4-5 ವರ್ಷಗಳಿಂದ ನಮ್ಮ ಗ್ರಾಮಕ್ಕೆ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ ಕೊಡಿ ಅಂತ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೆ ಅಪ್ರೂವಲ್ ಆಗಿದೆ ಅಂತ 4 ವರ್ಷಗಳಿಂದ ಕುಂಟು ನೆಪ ಹೇಳುತ್ತಿದ್ದಾರೆ ಹಾಗೂ ತಹಸೀಲ್ದಾರ್ ಅವರಿಗೆ ಕೂಡಾ ಅನೇಕ ಬಾರಿ ಮನವಿ ಮಾಡಿದರೂ ಕೂಡಾ ಗಮನ ಹರಿಸುತ್ತಿಲ್ಲ ಅಂಗನವಾಡಿ ಶಾಲೆ ಪೂರ್ತಿ ಹಾಳಾಗಿ ಹೋಗಿರುವುದರಿಂದ ಸುತ್ತ ಮುತ್ತಲಿನ ಜನರಿಗೆ ಪ್ರಾಣ ಭಯ ಉಂಟಾಗಿದ್ದು ಈ ಕೂಡಲೇ ಅಂಗನವಾಡಿ ಕಟ್ಟಡವನ್ನು ಡೆಮೋಲಿಸ್ಟ್ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡಬೇಕೆಂದು ಗ್ರಾಮಸ್ಥರ ವತಿಯಿಂದ ಮನವಿ ಮಾಡಿಕೊಂಡಿದ್ದಾರೆ.
ವರದಿ ಚಂದ್ರಶೇಖರ್ ಆರ್ ಪಾಟೀಲ್



















