ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರು -ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯಾಗಿದೆ : ಅಭಿನವ ಶ್ರೀ

ಬೀದರ್/ ಬಸವಕಲ್ಯಾಣ: ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನಮಾನವಿದೆ ಮನುಷ್ಯನ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಎಂದಿಗೂ ಮರೆಯಬಾರದು ಎಂದು ಗವಿಮಠದ ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅಭಿಪ್ರಾಯ ಪಟ್ಟರು.
ಗುರುಪೂರ್ಣಿಮೆ ನಿಮಿತ್ಯ ಗವಿಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಗುರುಗಳು ತಮ್ಮ ಭಕ್ತರಿಗೆ ಆಧ್ಯಾತ್ಮದ ಭೋದಾಮೃತವನ್ನು ನೀಡುತ್ತಿರುತ್ತಾರೆ.ಗುರುಗಳ ಋಣವನ್ನು ತೀರಿಸುವುದು ಅಸಾಧ್ಯ ಆದರೂ ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ. ಮಡಕೆಯ ಮಾಡುವಡೆ ಮಣ್ಣೆ ಮೊದಲು ತೊಡಕೆಯ ಮಾಡುವಡೆ ಹೊನ್ನೆ ಮೊದಲು ಶಿವಪಥವನರಿವಡೆ ಗುರುಪಥವೆ ಮೊದಲು ಎನ್ನುವ ಹಾಗೆ ಗುರುವಿನ ನಿಜವಾದ ಶಿಷ್ಯನಾದರೆ ಮಾತ್ರ ಮೋಕ್ಷವನ್ನು ಪಡೆಯಬಹುದು ಒಬ್ಬ ವ್ಯಕ್ತಿಯು ಅನೇಕ ಶಾಸ್ತ್ರಗಳನ್ನು ಪುಸ್ತಕಗಳನ್ನು ಓದುತ್ತಿದ್ದರು ಸಹ ಆ ವ್ಯಕ್ತಿಯು ತನ್ನ ಗುರುಗಳಿಗೆ ತನ್ನನ್ನು ತಾನೇ ಒಪ್ಪಿಸದಿದ್ದರೆ ಅದು ಯಾವುದೇ ಪ್ರಯೋಜನವಿಲ್ಲ. ಒಬ್ಬ ವ್ಯಕ್ತಿಯು ಮೋಕ್ಷ, ಸುಖ,ಶಾಂತಿ, ಸಮೃದ್ಧಿಯನ್ನು ಪಡೆಯಲು ಗುರು ಭಕ್ತಿಯು ಸಹಾಯ ಮಾಡುತ್ತದೆ ಎಂದು ಹೇಳಿದರು. ತಾಲೂಕಾ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ವೀರಶೆಟ್ಟಿ ಮಲಶೆಟ್ಟಿ ಅವರು ಸಮ್ಮುಖ ವಹಿಸಿ ಮಾತನಾಡುತ್ತಾ ಒಬ್ಬ ಗುರುವಿನ ಕೃಪೆಯಿಂದ ಅವನ ಅನುಯಾಯಿ ಆಧ್ಯಾತ್ಮಿಕ ಜಾಗೃತಿ ಎಂಬುದಾಗಿದೆ ದೀಕ್ಷೆ ಒಬ್ಬ ಗುರುವಿನ ದೈವಿಕ ಶಕ್ತಿಗಳನ್ನು ಅವನ ಮೇಲೆ ಅನುಗ್ರಹಿಸುವ ಒಂದು ಪದ್ಧತಿ ಎಂಬುದಾಗಿ ಹೇಳಲಾಗಿದೆ ಆ ದೀಕ್ಷೆಯ ಮೂಲಕ ದೈವೀಕತೆಯ ಮಾರ್ಗದಲ್ಲಿ ನಿರಂತರವಾಗಿ ಪ್ರಗತಿಯನ್ನು ಶಿಷ್ಯರು ಹೊಂದುತ್ತಾರೆ ಅದಕ್ಕೆ ಶರಣರು ಹರ ಮುನಿದರೆ ಗುರು ಕಾಯುವನು ಗುರು ಮುನಿದರೆ ಹರ ಕಾಯಲಾರ ಎಂದು ನುಡಿದರು.
ಶ್ರೀ ಸುಭಾಷ್ ಚಂದ್ರ ನಾಗರಾಳೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಅವರು ಗುರು ಸಾಧುವಿನ ಗುಣಗಳನ್ನು ಹೊಂದಿರುವ ಗೌರವಾನ್ವಿತರು ಅವರ ಅನುಯಾಯಿಗಳ ಮನಸ್ಸನ್ನು ಅರಳಿಸುವ ಶಕ್ತಿ ಗುರುವಿನಲ್ಲಿರುತ್ತದೆ ಗುರು ಸಿಗುವುದು ದುರ್ಲಭ ಸಿಕ್ಕರೆ ಬಹು ಲಾಭ ಎಂದು ನುಡಿದರು. ನಗರ ಸಭೆಯ ಪೌರಾಯುಕ್ತರಾದ ರಾಜು ಡಿ ಬಣಕಾರ ಅವರು ಮಾತನಾಡುತ್ತಾ ಗುರು ಅಂಧಕಾರ ಕಳೆಯುವಂತಹ ವ್ಯಕ್ತಿಯಲ್ಲ ಅವರು ಸಮಾಜಕ್ಕೆ ಒಂದು ಶಕ್ತಿ “ಗು” ಅಂದರೆ ಕತ್ತಲೆ “ರು” ಅಂದರೆ ಬೆಳಕು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದುಕೊಂಡು ಹೋಗುವಂತ ಶಕ್ತಿ ಗುರುವಿನಲ್ಲಿರುತ್ತದೆ ಅಂತಹ ಗುರುವಿಗೆ ಗೌರವ ಕೊಡುವಂತಹ ದಿನ ಗುರುಪೂರ್ಣಿಮೆ ಇಂತಹ ದಿನದಂದು ಗುರುವಿನ ದರ್ಶನ ಆಶೀರ್ವಾದ ಪಡೆಯುವಂಥದ್ದು ಎಲ್ಲರಿಗೂ ಸಂತೋಷದ ಸಂಗತಿ ಎಂದು ನುಡಿದರು. ಬಸವಕಲ್ಯಾಣದ ತಹಶೀಲ್ದಾರ ದತ್ತಾತ್ರೇ ಗಾದಾ ಅವರು ಮಾತನಾಡುತ್ತಾ ಅವರು ಶರಣರ ಭೂಮಿ ಬಸವಕಲ್ಯಾಣದ ಗವಿಮಠದಲ್ಲಿ ಗುರು ಸಾನಿಧ್ಯದಲ್ಲಿ ಗುರುಪೂರ್ಣಿಮಾ ಮಾಡುವಂತದ್ದು ಒಂದು ವಿಶೇಷ ಎಂದು ಬಣ್ಣಿಸಿದರು. ಬಸವಕಲ್ಯಾಣ ಶ್ರೀ ಸಿದ್ದು ಊಳ್ಳೆ ದಂಪತಿ ಅವರು ಗುರುಗಳ ಪಾದಪೂಜೆ ನೆರವೇರಿಸಿದರು. ವಿಧಿವತ್ತಾಗಿ ಶ್ರೀ ವೇ. ಪಂಚಯ್ಯಾ ಸ್ವಾಮಿ ಗೋರ್ಟಾ ಅವರು ಪೂಜೆ ನಡೆಸಿಕೊಟ್ಟರು. ಕಲ್ಯಾಣ ನಾಡು ಗ್ರಾಮೀಣ ಜನಪದ ಕಲಾ ಸಂಘದ ವತಿಯಿಂದ ವಿವಿಧ ರೀತಿಯ ಸಂಗೀತ ಸೇವೆ ಸಲ್ಲಿಸಿ, ಕೋಲಾಟ, ಗುರುವಿನ ತತ್ವಪದ, ಭಜನೆ ಜರುಗಿದವು.
ಈ ಕಾರ್ಯಕ್ರಮದಲ್ಲಿ ಶ್ರೀ ಬಸವಂತಪ್ಪ ಲವಾರೆ, ದಯಾನಂದ ಶೀಲವಂತ, ಮಲ್ಲಿಕಾರ್ಜುನ್ ಅಲಗುಡೆ, ಸೂರ್ಯಕಾಂತ ಬಿರಾದಾರ, ದಿಲೀಪ ದೇಸಾಯಿ, ಶರಣಪ್ಪ ಜಮಾದಾರ, ವಿಠ್ಠಲ್ ದೋಮೆ ಎಕಲೂರ, ಬಸವರಾಜ ಕಣಜೆ ಮುಡಬಿ, ರಾಜಪ್ಪ ಹಲಿಂಗೆ ಬೇಲೂರ, ಶಾಮಸುಂದರ ಗುಂಡೂರೆ, ಸುಭಾಷ ಮಂಠಾಳೆ, ಪ್ರೊ. ಸೂರ್ಯಕಾಂತ ಶೀಲವಂತ, ಇನ್ನಿತರರು ಉಪಸ್ಥಿತರಿದ್ದರು.
ವಿಠ್ಠಲ ರೆಡ್ಡಿ ನಿರೂಪಿಸಿ ವಂದಿಸಿದರು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!