ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ನಮಸ್ತೆ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು ಎ ನಸ್ಸರುಲ್ಲಾ ರವರು ಮಾತನಾಡಿ ನಮಸ್ತೆ ಸ್ಕೀಮ್ ಅಡಿಯಲ್ಲಿ ನೊಂದಾಯಿತ ಪೌರಕಾರ್ಮಿಕರಿಗೆ ಆಯುಷ್ಮಾನ್ ಕಾರ್ಡ್ ಹಾಗೂ ಸುರಕ್ಷಾ ಧರಿಸುಗಳನ್ನು ವಿತರಿಸಲಾಯಿತು.
ಆರೋಗ್ಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೌರಕಾರ್ಮಿಕರು ಸ್ವಚ್ಛತೆ ಕಾರ್ಯ ನಿರ್ವಹಿಸುತ್ತಿರುವಾಗ ಕಡ್ಡಾಯವಾಗಿ ಮಾಸ್ಕ್ , ಹ್ಯಾಂಡ್ ಗ್ಲೌಸ್, ಸುರಕ್ಷಾ ಧರಿಸುಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸಬೇಕೆಂದು ಪೌರಕಾರ್ಮಿಕರಿಗೆ ಹೇಳಿದರು.
ಹಾಗೂ ಚಿಂದಿ ಆಯುವವರಿಗೆ ಕಡ್ಡಾಯವಾಗಿ ನಮಸ್ತೆ ಸ್ಕೀಮ್ ಅಡಿಯಲ್ಲಿ ನೊಂದಾಯಿಸುವಂತೆ ಹಾಗೂ ಇದರಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು ಅನುಷಾ, ಇಂಜಿನಿಯರ್ ಪ್ರಭು ಬಿರದಾರ್, ಸದಸ್ಯರುಗಳಾದ , ಟಿ ರಾಮಪ್ಪ, ಶಿವಣ್ಣ, ಕಾಸಲು ಪ್ರಕಾಶ, ಮೇಘರಾಜ, ವಿನಯ್ ಕುಮಾರ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ ಶಶಾಂಕ್.ಪಿ



















