ಬಳ್ಳಾರಿ/ ಕಂಪ್ಲಿ : ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ನಾನಾ ಯೋಜನೆಯಡಿ ಸುಮಾರು 5 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ, ಗ್ರಂಥಾಲಯ ಕಟ್ಟಡ, ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಾಸಕ ಜೆ.ಎನ್.ಗಣೇಶ ಇವರು ಶನಿವಾರ ಭೂಮಿ ಪೂಜೆ ಸಲ್ಲಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2024-25ನೇ ಸಾಲಿನ ಎಸ್ಸಿಟಿ ಮತ್ತು ಟಿಎಸ್ಪಿ ಯೋಜನೆಯಡಿ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ ಕಟ್ಟಡ ಕಾಮಗಾರಿ ಹಾಗೂ 2024-25ನೇ ಸಾಲಿನ ಕೆಕೆಆರ್ಡಿಬಿಯ ಸಿಎಂಡಿಕ್ಯೂ ಯೋಜನೆಯಡಿ ಪಟ್ಟಣದ 19ನೇ ವಾರ್ಡಿನ ಗಂಗಾನಗರದಲ್ಲಿ, 21ನೇ ವಾರ್ಡಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಮತ್ತು 23ನೇ ವಾರ್ಡಿನ ಹುಲಿಗೆಮ್ಮ ಕ್ಯಾಂಪ್ ಬಳಿಯಲ್ಲಿ ತಲಾ 50 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ 50 ಲಕ್ಷ ವೆಚ್ಚದ ಅಂಬೇಡ್ಕರ್ ವೃತ್ತದಿಂದ ನಡುವಲ ಮಸೀದಿವರೆಗಿನ ನೆಲಹಾಸು ಅಭಿವೃದ್ಧಿ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಸಿ.ಆರ್.ಹನುಮಂತ, ಕೆ.ಎಸ್.ಚಾಂದ್ಬಾಷಾ, ಲಡ್ಡು ಹೊನ್ನೂರವಲಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಧಾನ ಕಾರ್ಯದರ್ಶಿ ರಘುನಾಯಕ, ಮುಖಂಡರಾದ ಮೆಟ್ರಿ ಗಂಗಾಧರ, ಎಲ್.ರಾಮನಾಯ್ಡು, ಬಿ.ನಾರಾಯಣಪ್ಪ, ಬಿ.ಸಿದ್ದಪ್ಪ, ಎಂ. ಗೋಪಾಲ್, ಸುರೇಶ ರೆಡ್ಡಿ, ಬಿ. ಜಾಫರ್, ಕೆ.ಷಣ್ಮುಕಪ್ಪ, ವಿ.ಸತ್ಯಪ್ಪ, ಹೊನ್ನೂರಪ್ಪ, ಎಲೆಮಾರ ನಾಗರಾಜ, ಅಯ್ಯೋಧಿ ವೆಂಕಟೇಶ, ಎನ್.ಗಂಗಣ್ಣ, ಆಟೋ ರಘು, ಬಿ.ಪರಶುರಾಮ, ಅಕ್ಕಿ ಜಿಲಾನ್, ಬಿ.ಈರಪ್ಪ, ಯು.ವಿರುಪಣ್ಣ, ಪೇಂಟರ್ ಮಸ್ತಾನ್, ರಮೇಶ, ಬಿ.ನಾಗರಾಜ, ವೀರಭದ್ರಪ್ಪ, ಡಿಸ್ ಪ್ರಸಾದ್, ಶಶಿಕುಮಾರ, ರಾಜಾಭಕ್ಷಿ ಸೇರಿದಂತೆ ಕಾರ್ಯಕರ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















