ಬಾಗಲಕೋಟೆ /ಬಾದಾಮಿ :ಕರ್ನಾಟಕ ರಕ್ಷಣಾ ವೇದಿಕೆ ಬಾದಾಮಿ ತಾಲೂಕಿನ ಹಿರೇನಸಬಿ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು.
ಟಿ ಎ ನಾರಾಯಣಗೌಡರ ಆದರ್ಶ, ತತ್ವಸಿದ್ಧಾಂತಗಳನ್ನು ಮೆಚ್ಚಿ, ಗ್ರಾಮದ ಯುವಕರು ಸೇರ್ಪಡೆಗೊಂಡರು.
ಈ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರಾದ ರಂಗಪ್ಪ ರಂಗನ್ನವರ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರವಿ ಕಪಲಿ, ಗ್ರಾಮದ ಇನ್ನೋರ್ವ ಹಿರಿಯರಾದ ರಂಗಣ್ಣಿ ರಂಗನ್ನವರ ಮತ್ತು ಹಿರೇನಸಬಿ ಗ್ರಾಮದ ಯುವಕರು ಭಾಗಿಯಾದರು.
ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಮಂಜುನಾಥ ಕಟ್ಟಿಮನಿ,
ಬಾದಾಮಿ ತಾಲೂಕ ಗೌರವಾಧ್ಯಕ್ಷರಾದ ರವಿ ಪಾತ್ರೋಟಿ, ತಾಲೂಕ ಅಧ್ಯಕ್ಷರಾದ ಮಂಜುನಾಥ ಕಲಾಲ, ತಾಲೂಕು ಉಪಾಧ್ಯಕ್ಷರಾದ ನಾಗರಾಜ ಮಾದರ, ಪ್ರಧಾನ ಕಾರ್ಯದರ್ಶಿಯಾದ ಸಮೀರ ಹವಾಲ್ದಾರ, ನಗರ ಘಟಕದ ಅಧ್ಯಕ್ಷರಾದ ಫಕೀರಪ್ಪ ಅಮರಗೋಳ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಂಜು ಭಜಂತ್ರಿ, ಸಹ
ಕಾರ್ಯದರ್ಶಿ ಕೃಷ್ಣ ಮ್ಯಾಗೇರಿ , ನಗರ ಘಟಕದ ಸಹ ಸಂಚಾಲಕರಾದ ಅನ್ವರ್ ಅತ್ತಾರ,
ಸಾಮಾಜಿಕ ಜಾಲತಾಣದ ಸಂಚಾಲಕರಾದ ಉದಯ ಬಿಂಕದಕಟ್ಟಿ, ಹಿರಿನಸಬಿ ಗ್ರಾಮದ ನೂತನ ಅಧ್ಯಕ್ಷರಾದ ಸುನೀಲ ದೇವರಮನಿ ಸೇರಿದಂತೆ ಹಲವು ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ಅಬ್ದುಲಸಾಬ ನಾಯ್ಕರ



















