ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ – ಕುರಿಗಾಹಿಗಳಿಗೆ ಇದು ರಕ್ಷಾ ಕವಚ

ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರ ಅನುಪಸ್ಥಿತಿ ಸಲ್ಲದು, ಮಾನವೀಯತೆ ದೃಷ್ಟಿಯಿಂದ ಅವರಿಗೆ ಸಮಲತ್ತು ನೀಡಿ – ಶರಣಗೌಡ ಕಂದಕೂರ.

ಯಾದಗಿರಿ/ಗುರುಮಠಕಲ್ : ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಇಂದು ಗುರುಮಠಕಲ್ ಪಟ್ಟಣದ ಪಶು ಆಸ್ಪತ್ರೆಯಲ್ಲಿ ತಾಲೂಕಿನ ವಲಸೆ ಕುರಿಗಾಹಿಗಳಿಗೆ ಶಾಸಕರಾದ ಶರಣಗೌಡ ಕಂದಕೂರ ಅವರು ಗುರುತಿನ ಚೀಟಿ ವಿತರಣೆ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳ ನಾಡಿದ ಉಪನಿರ್ದೇಶಕರು ಆದ ರಾಜಗೋಪಾಲ್ ದೇಶಮುಖ್ ಅವರು 20 ಕ್ಕಿಂತ ಹೆಚ್ಚು ಕುರಿಗಳನ್ನು ಹೊಂದಿದ್ದು, ಒಂದು ಕಡೆಯಿಂದ ಇನ್ನೊಂದು ಕಡೆ ವಲಸೆ ಹೋಗುವ ಕುರಿಗಾಹಿಗಳಿಗೆ, ಸರಕಾರದಿಂದ ನೀಡಲಾಗಿರುವ ಈ ಗುರುತಿನ ಚೀಟಿ ಕುರಿಗಳ ಆರೈಕೆ,ಲಸಿಕೆ ಹಾಗೂ ಅಪಘಾತಗಳು, ಕುರಿಗಳ ಕಳವು ಆದಾಗ ಕುರಿಗಾಹಿಗಳಿಗೆ ರಕ್ಷಾ ಕವಚವಾಗಿ ಅವರ ನೆರವಿಗೆ ಬರಲಿದೆ, ಅಷ್ಟೇ ಅಲ್ಲದೆ ಕುರಿಗಾಹಿಗಳ ಮಕ್ಕಳು ಓದಲು ವಸತಿ ಶಾಲೆಗಳಲ್ಲಿ 10 ಪ್ರತಿಶತ ಮೀಸಲಾತಿ ಸಿಗುವುದು ಜಾನುವಾರು ಆಕಸ್ಮಿಕ ಸಾವು ಆದಾಗ ಮರಣೋತ್ತರ ಪರೀಕ್ಷೆ ಮಾಡಿ ಪರಿಹಾರ ಸಹ ಈ ಗುರುತಿನ ಚೀಟಿ ಹೊಂದಿರುವ ಕುರಿಗಾಹಿಗಳು ಪಡೆಯಬಹುದು ಎಂದು ಹೇಳಿದರು.

ತಾವು ಇರುವ ಸ್ಥಳದಲ್ಲಿಯೇ ಕುರಿಗಳಿಗೆ ಲಸಿಕೆ ಅವುಗಳ ಆರೈಕೆ, ವನ್ಯಜೀವಿಗಳಿಂದ ಕಳ್ಳರಿಂದ ಕುರಿಗಳ ರಕ್ಷಣೆಗೆ ಬಂದೂಕು ಸಹ ವಿತರಿಸಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು 113 ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸಿ ಈ ಗುರುತಿನ ಚೀಟಿಯ ಸದುಪಯೋಗ ಗ್ರಾಮೀಣ ಭಾಗದ ಜನರು ಈ ಗುರುತಿನ ಚೀಟಿ ಪಡೆಯುವುದರ ಮೂಲಕ ಸರಕಾರದ ಸೌಲಭ್ಯಗಳು ಪಡೆಯಬೇಕು, ಹೆಚ್ಚಿನ ಮಾಹಿತಿಯ ಕೊರತೆಯ ಕಾರಣ ಕಡಿಮೆ ಪ್ರಮಾಣದಲ್ಲಿ ಗುರುತಿನ ಚೀಟಿ ಪಡೆದಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಗುರುತಿನ ಚೀಟಿಯ ಲಾಭಗಳ ಕುರಿತು ತಿಳಿಸಿ ಈ ಗುರುತಿನ ಚೀಟಿ ಹೆಚ್ಚು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಪ್ರಭಾವಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಬಂದೂಕು ಪಡೆದು ಅದರ ದುರ್ಬಳಕೆ ಮಾಡದಿರಲು ಹಾಗೂ ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯರು ಸಹ ಸ್ಥಿತಿ ಆಗದಂತೆ ಮಾನವೀಯತೆ ಆಧಾರದ ಮೇಲೆ ಪಶು ಸಂಗೋಪನೆ ಮಾಡುವವರಿಗೆ ಸವಲತ್ತು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಶಶಿಕಿರಣ ಹಜಾರೆ, ಉಪನಿರ್ದೇಶಕರು ಶರಣಭೂಪಾಲರೆಡ್ಡಿ, ಸಂಜೀವ ರೆಡ್ಡಿ ಸಂಘದ ಅಧ್ಯಕ್ಷರು, ವಿಜಯಕುಮಾರ್ ಪಶು ವೈದ್ಯರು ಸೇರಿದಂತೆ ಸಿಬ್ಬಂದಿಗಳು ಮತ್ತು ವಿವಿಧ ಗ್ರಾಮಗಳಿಂದ ಬಂದಿರುವ ಕುರಿಗಾಹಿಗಳು ಹಾಜರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!