ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕಿನ ಸಾಮಾಜಿಕ ಹಾಗೂ ರೈಲು ಹೋರಾಟಗಾರರೂ ಮತ್ತು ನ್ಯಾಷನಲ್ ಹ್ಯೂಮನ್ ರೈಟ್ಸ್ ನ ರಾಜ್ಯಾಧ್ಯಕ್ಷರಾದ ಶ್ರೀ ಬಿ ಯು ಬೈರಕದಾರ ಅವರು ರಾಮದುರ್ಗ ಪಟ್ಟಣಕ್ಕೆ ನೂತನ ರೈಲು ಮಾರ್ಗ ನಿರ್ಮಿಸುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸಿ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ.
ಆದರೆ ಇಲ್ಲಿಯವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆಯದ ಕಾರಣ ಮುಂಬರುವ ತಿಂಗಳು ಅಂದರೆ ಆಗಸ್ಟ್ 11 ನೇ ತಾರೀಖಿನಿಂದ ರಾಮದುರ್ಗ ಪಟ್ಟಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ರೈಲು ಹೋರಾಟ ಸಮಿತಿ ರಾಮದುರ್ಗ ವತಿಯಿಂದ ತಹಸೀಲ್ದಾರ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ರಾಮದುರ್ಗ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈಲು ಹೋರಾಟ ಸಮಿತಿಯ ಮುಖಂಡರುಗಳಾದ ಸಿ,ಎಸ್ ಹಿರೇಮಠ್ , ಶಶಿಕಾಂತ ನೆಲ್ಲೂರು , ಡಿ. ಎಫ್ ಹಾಜಿ, ದಾದಾಪೀರ್ ಕೆರೂರ, ನಿವೃತ್ತ ಶಿಕ್ಷಕರಾದ ಸುರೇಶ್ ಕಲ್ಲೂರ, ನ್ಯಾಯವಾದಿಗಳಾದ ರಾಜೇಶ ಹರ್ಲಾಪುರ, ಪತ್ರಕರ್ತರಾದ ವಿರೇಶ್ ಬಳಿಗೇರ, ರಂಗನಾಥ ಮೂಲಿಮನಿ ಉಪಸ್ಥಿತರಿದ್ದರು.
- ಕರುನಾಡ ಕಂದ



















