
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಮುರಗುಂಡಿ, ಪ್ರಾದೇಶಿಕ ಅರಣ್ಯ ವಲಯ ಅಥಣಿ, ಹಾಗೂ ಗ್ರಾಮ ಪಂಚಾಯತ ಮುರಗುಂಡಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ವನಮಹೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಛತ್ರಿ (ಕೊಡೆ) ವಿತರಣಾ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿ ಅವರು ಸಸಿಗೆ ನೀರುಣಿಸವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಕಾಟಕರ ಗ್ರಾ. ಪಂ, ಅಧ್ಯಕ್ಷರು ಮುರಗುಂಡಿ, ಶ್ರೀ ಮಕಬುಲ ನದಾಫ್ ಅಧ್ಯಕ್ಷರು ಎಸ್, ಡಿ, ಎಂ, ಸಿ ಮುರಗುಂಡಿ, ಮಾಜಿ ಜಿ,ಪಂ, ಸದಸ್ಯರಾದ ಶ್ರೀ ವಿನಾಯಕ ಬಾಗಡಿ, ಶ್ರೀ ಬರಮಾ ಮಗಾಡಿ, ಶ್ರೀ ಮಹಾದೇವ ಕೋರಿ, ಶ್ರೀ ರಮೇಶ ಕುಸನಾಳೆ ಸದಸ್ಯರು ಗ್ರಾ,ಪಂ, ಮುರಗುಂಡಿ, ಶ್ರೀ ರಾಜು ಗುಡೊಡಗಿ ಅಥಣಿ ಪುರಸಬೆ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮುಂಜೆ, ಅರಣ್ಯಾಧಿಕಾರಿಗಳಾದ ಶ್ರೀ ರಾಕೇಶ ಅರ್ಜುನವಾಡ, ಎಇಇ ZP ಅಧಿಕಾರಿಗಳಾದ ಶ್ರೀ ಈರಣ್ಣ ವಾಲಿ ಹಾಗೂ ಮತ್ತು ಶಾಲಾ ಶಿಕ್ಷಕರು, ಶಿಕ್ಷಕಿಯರು ಹಾಗೂ ಮುದ್ದು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ ವಿಠ್ಠಲ ಖೋಕಾಟೆ, ಅಥಣಿ



















