ಸಂಚಾಲಕರಾಗಿ ಆನಂದ ಭಜಂತ್ರಿ ನೇಮಕ.
ಯಾದಗಿರಿ/ಗುರುಮಠಕಲ್: ತಾಲೂಕಿನ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ ನಿನ್ನೆ (ಜುಲೈ ೨೭) ರಂದು ಜರುಗಿತು. ಈ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಘಟನಾ ಚಾಲಕರಾದ ಮಲ್ಲಿಕಾರ್ಜುನ್ ಕ್ರಾಂತಿಕಾರಿ ಅವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ದಲಿತ ಚಳುವಳಿಯ ಬೆನ್ನೆಲುಬು ಹಾಗೂ ನಿವೃತ್ತ ಪ್ರೊಫೆಸರ್ ಮಾನು ಹರಿಕಾರ, ರಾಜ್ಯ ಸಮಿತಿ ಜಿಲ್ಲಾ ಮುಖಂಡರಾದ ಮಲ್ಲಿಕಾರ್ಜುನ್ ತಳ್ಳಳ್ಳಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮಾಡಿದರು.
ತಾಲೂಕಿನ ಸಂಚಾಲಕರಾಗಿ ಆನಂದ ಭಜಂತ್ರಿ ಗೋಪಾಲಾಪುರ, ಸಹ ಸಂಚಾಲಕರಾಗಿ ಅಂಜನೇಯ ಯಲ್ಹೇರಿ, ರಘು ಪರಮೇಶ್ ಪಲ್ಲಿ, ವೆಂಕಟೇಶ್ ಜೈ ಗ್ರಾಮ, ಕಾಶೀನಾಥ್ ಪರಮೇಶ್ ಪಲ್ಲಿ, ಇನ್ನು ಖಜಾಂಚಿಯಾಗಿ ಮೌನೇಶ್ ಗೋಪಾಲಪುರ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಈ ಸಂದರ್ಭದಲ್ಲಿ ರವಿಚಂದ್ರ ಬಮ್ಮನಹಳ್ಳಿ, ಭೀಮಣ್ಣ ಪೂಜಾರಿ, ರಂಗಸ್ವಾಮಿ, ನಾಗಪ್ಪ ಅರಿಕೇರಾ,ಇನ್ನಿತರರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















