ಬಾಗಲಕೋಟೆ/ ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ೨೦೨೫ ರ ವಾರ್ಷಿಕ ಕಾರ್ಯಕ್ರಮ ಸಂಗಮ ಸಾಹಿತ್ಯ ಸಂಭ್ರಮ ನಿಮಿತ್ತ ತಾಲೂಕು ಮಟ್ಟದ ಕವಿತಾ ಸ್ಪರ್ಧೆಗೆ ಕವನಗಳನ್ನು ಆಹ್ವಾನ ಮಾಡಿದೆ. ಕವಿತೆ ಸ್ವತಂತ್ರವಾಗಿದ್ದು ಅಪ್ರಕಟಿತ ಆಗಿರಬೇಕು.
ರೂ.೧೦೦೦ ಪ್ರಥಮ, ರೂ.೭೫೦ ದ್ವಿತೀಯ ಮತ್ತು ರೂ.೫೦೦ ನಗದು ಹಾಗೂ ಉತ್ತಮ ಕವನ ಸಂಕಲನ ಸೇರಿ ಮೂರು ಬಹುಮಾನಗಳಿವೆ.
ಕವನಗಳನ್ನು ಆಗಸ್ಟ್ ೩೦ ರೊಳಗೆ ಸಿದ್ದಲಿಂಗಪ್ಪ ಬೀಳಗಿ ನಿವೃತ್ತ ಉಪನ್ಯಾಸಕರು ಮಹಾಂತನಗರ ಹುನಗುಂದ ೫೮೭೧೧೮ ಇವರಿಗೆ ಲಿಖಿತ ರೂಪದಲ್ಲಿ ೯೪೪೮೫೪೧೩೫೬ (ಸಿದ್ದಲಿಂಗಪ್ಪ ಬೀಳಗಿ) ಅಥವಾ ೯೪೪೮೫೧೮೫೨೬ (ಎಸ್ಕೆ ಕೊನೆಸಾಗರ) ಈ ಮೊಬೈಲ್ ನಂಬರ್ ಗಳಿಗೆ ವಾಟ್ಸಪ್ ಮೂಲಕ ಕಳಿಸಬಹುದು ಎಂದು ಸಂಗಮ ಪ್ರತಿಷ್ಠಾನದ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ಕೋರಿದ್ದಾರೆ.
- ಕರುನಾಡ ಕಂದ



















