ಬೀದರ/ಬಸವಕಲ್ಯಾಣ: ನಗರದ ಕಾಳಿಗಲ್ಲಿಯ ಪಕ್ಕದ ಬಸ್ ನಿಲ್ದಾಣದ ದಾರಿಯಲ್ಲಿರುವ ಸುಮಾರು ವರ್ಷಗಳ ಇತಿಹಾಸವುಳ್ಳ ನಾಗದೇವತೆಯ ಮೂರ್ತಿ (ನಾಗಣ್ಣಾ ಕಟ್ಟಿ) ಇದ್ದು, ಇಂದು ಕಾಳಿಗಲ್ಲಿಯ ಓಣಿಯ ತಾಯಂದಿರು, ಯುವಕರ ಬಳಗ ಹಾಗೂ ಸದ್ಭಕ್ತರೆಲ್ಲರೂ ಸೇರಿ ನಾಗರ ಪಂಚಮಿ ಹಬ್ಬದ ನಿಮಿತ್ಯ ಅಲ್ಲಿರುವ ಸುತ್ತಲಿನ ಕಸ ಕಡ್ಡಿಗಳಿಂದ ಕೂಡಿದ ಪರಿಸರವನ್ನು ಶುಚಿಗೊಳಿಸಿ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಾತೃಶಕ್ತಿ ರವರಿಂದ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಗರದ ಕಾಳಿನಲ್ಲಿ ನಿವಾಸಿಗಳಾದ ಶ್ರೀಮತಿ ಗಂಗೋತ್ರಿ ವಾತಡೇ, ಸಂಗೀತಾ ವಾತಡೆ, ಲಕ್ಷ್ಮೀ ಗಣಚಾರಿ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರಾದ ಶ್ರೀ ಶ್ರೀಶೈಲ್ ವಾತಡೇ, ಪ್ರಧಾನ ಬಜರಂಗದಳ ಸಂಯೋಕಜರಾದ ರವಿ ನಾವದ್ದೇಕರ್, ಸಹ ಸಂಯೋಜಕರಾದ ಶ್ರೀನಿವಾಸ ಬಿರಾದಾರ, ಸಚಿನ ಗರುಡ್ಕರ, ಗೋರಕ್ಷಾ ಪ್ರಮುಖರಾದ ವಿನೋದ ಬಡಗೇಕರ, ಅಜಯ ಗೌಳಿ, ಸುರಕ್ಷಾ ಪ್ರಮುಖರಾದ ಶ್ರೀ ಸಚಿನ ಸೂರ್ಯವಂಶಿ, ಬಾಬು ಮಲೋದೆ, ಸುಭಾಷ ಖರುಣೆ, ಸಂಜುಕುಮಾರ ಮೇತ್ರೆ, ಸುಭಾಷ ಬುಡಗೆ, ಅಮೂಲ ಮಲೋದೆ, ಶೇಖರ ಸಾಂಡೆ, ಪವನ ಚಾಮಾಲೆ, ಸಾಹಿಲ ಜಾಧವ, ನಾಗರಾಜ ಭಂಡಾರಿ, ಚಿನ್ಮಯ, ರಾಜು ಬುಯ್ಕೆ, ಸಂದೀಪ ಮೈಲಾರೆ, ಗುರು ಪವಾಡೆ, ಮಲ್ಲಯ್ಯಾ ಶಾನಭೋಗಿಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸ ಬಿರಾದಾರ



















