ಬಳ್ಳಾರಿ / ಕಂಪ್ಲಿ : ತಾಲೂಕಿನ ಎಚ್. ವೀರಾಪುರ ಗ್ರಾಮದ ಶ್ರೀ ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಪರಮಪೂಜ್ಯ ಜಡೇಶ ತಾತನವರ 34ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಗುರುವಂದನ ಕಾರ್ಯಕ್ರಮ ಜರಗಿತು
ಈ ವೇಳೆ ಜಡೇಶ ತಾತನವರು ಮಾತನಾಡಿ ಪ್ರತಿಯೊಬ್ಬರು ಮಠ ಪರಂಪರೆಯೊಂದಿಗೆ ಒಡನಾಟ ಹೊಂದಿ ಗುರು ಹೇಳಿದ ವಿಚಾರಗಳನ್ನು ಚಾಚು ತಪ್ಪದೆ ಜೀವನದಲ್ಲಿ ಪಾಲಿಸಿಕೊಂಡು ಬಂದರೆ ಸನ್ಮಾರ್ಗದಲ್ಲಿ ಸಾಗಲು ಸಾಧ್ಯ ಅಲ್ಲದೆ ಭಕ್ತರು ಮಠದ ಶಕ್ತಿಯಾಗಿದ್ದು ಅವರು ಸದಾಚಾರ ಸಂಪನ್ನರಾಗಿ ಸಮಾಜದಲ್ಲಿ ರೂಪಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗಾದಿಲಿಂಗಪ್ಪ ಬಾನಟ್ಟಿ ಶಿವರಾಮಪ್ಪ ರಾಜಸಾಬ್ ಬಸವರಾಜ ಜಡೇಶ ಗೌಡ ಶಿಕ್ಷಕರಾದ ಎಸ್ ರಾಮಪ್ಪ ಲೋಕೇಶ್ ಶ್ರೀನಿವಾಸ್ ಸೇರಿದಂತೆ ಶ್ರೀ ಮಠದ ಸದ್ಭಕ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















