ಯಾದಗಿರಿ/ ಗುರುಮಠಕಲ್: ಪಟ್ಟಣದ ಲಕ್ಷ್ಮೀನಗರ ಬಡಾವಣೆಯಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಗಸ್ಟ್ 6 ರಂದು ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪ್ರವೀಣ ಪಟೇಲ್ ತಿಳಿಸಿದ್ದಾರೆ.
ಶ್ರಾವಣಮಾಸದ ನಿಮಿತ್ಯ ವಿದ್ಯೆ ಮತ್ತು ಬುದ್ದಿವಂತಿಕೆಯ ಪ್ರತೀಕವಾದ ಅಕ್ಷರಾಭ್ಯಾಸ ಕಾರ್ಯಕ್ರಮವು ಮಳಖೇಡ ಮೂಲಾಧಾರ ಮಠದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಪಾಲಕರು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದ್ದಾರೆ. ಪುರಸಭೆ ಸದಸ್ಯರು ಬಾಲಪ್ಪ ದಸರಿ, ಉದ್ಯಮಿ ಶಿವಕುಮಾರ ಜಾಡರ್, ಆನಂದ ನೀರೆಟಿ ,ಶಿಕ್ಷಕಿ ವಿಜಯಲಕ್ಷ್ಮಿ ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರರಾದ ಬಸ್ಸಪ್ಪ ಸಂಜನೋಳ, ಮಲ್ಲಿಕಾರ್ಜುನ ಕಾಕಲವಾರ, ಗೋಪಾಲ ಕಂದೂರ ವೀರಪ್ಪ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















