ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ಬೆಂಗಳೂರಿನ ಉದ್ಯಮಿಗಳಾದ ಗದ್ದೆಮನೆ ಶಶಿಯಣ್ಣನವರು 40,000 ಮೌಲ್ಯದ ಅತ್ಯುತ್ತಮ ಗುಣಮಟ್ಟದ ಸಮವಸ್ತ್ರ, ಟ್ರ್ಯಾಕ್ ಸೂಟ್ ಮತ್ತು ಬ್ಯಾಗ್ ನೀಡಿದರು.
ಈ ಸರಳ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿ ಆರ್ ಸುರೇಶ್ ರವರು ಮಾತನಾಡಿ ಶಶಿಯಣ್ಣರವರ ಕಾರ್ಯವನ್ನು ಮೆಚ್ಚಿದರು. ಕೇವಲ ನಮ್ಮ ಶಾಲೆ ಮಾತ್ರವಲ್ಲದೆ ಸುಮಾರು 5000 ಬಡಮಕ್ಕಳಿಗೆ ಪ್ರತಿ ವಿದ್ಯಾರ್ಥಿಗೆ 2500 ರೂಪಾಯಿ ಖರ್ಚು ಮಾಡಿ ವಿದ್ಯಾವಸ್ತುಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು. ಮುಖ್ಯಗುರುಗಳಾದ ಮಮತಾರವರು ಸರ್ಕಾರಿ ಶಾಲೆಗಳಿಗೆ ಇಂತವರ ಅವಶ್ಯಕತೆ ಇದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತೀಶ್, ಸದಸ್ಯರಾದ ವಿನಯ್, vssn ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪತ್ರಿಕೆ ವರದಿಗಾರರು ಮತ್ತು ಶಶಿಯಣ್ಣ ಪರವಾಗಿ ಬಂದ ಅವರ ತಂಡ ಉಪಸ್ಥಿತರಿದ್ದರು.
- ಕರುನಾಡ ಕಂದ



















