
ಬೆಳಗಾವಿ : ನಿನ್ನೆಯಿಂದ ಬಿಡದೆ ಸುರಿದ ಮಳೆಗೆ
ರಸ್ತೆ ಕೊಚ್ಚಿಕೊಂಡು ಘಟನೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ.
30 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದಾಗಿದ್ದು,
ಪ್ರತಿ ವರ್ಷ ಮಳೆಗೆ ರಸ್ತೆ ಕಿತ್ತುಕೊಂಡು ಹೋಗುತ್ತದೆ,
ಶಾಲಾ ಮಕ್ಕಳು ಮತ್ತು ವಯೋವೃದರಿಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಬಸವಾಗಿ ಹರಿಯುವ ಹಳ್ಳಕ್ಕೆ ದೊಡ್ಡು ಪೈಪ್ ಹಾಕಿ ರಸ್ತೆ ಮಾಡಿಕೊಡಿ ಎಂದು ಹಲವು ಬಾರಿ ಗ್ರಾಮ ಪಂಚಾಯತಿವರಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ,
ಬೇಸತ್ತ ರೈತರು ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದರು ಆದ್ರೆ ನಿನ್ನೆಯಿಂದ ಸುರಿದ ಭಾರೀ ಮಳೆಗೆ ರಸ್ತೆ ಕಿತ್ತು ಹೋಗಿದೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಸುದ್ದಿ ನೋಡಿಯಾದ್ರೂ ರೈತರಿಗೆ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.
ಗ್ರಾಮಸ್ಥರಾದ ಪ್ರಕಾಶ ಬಿರಾದಾರ ,ಸಿದ್ರಾಯ ಸತ್ತಿ ಇನ್ನೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ ಅಥಣಿ.



















