ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಕುಡುಕ ನನ್ಮಕ್ಳು ” ಸಿನಿಮಾದಲ್ಲಿ ಕೊಟ್ಟೂರಿನ ಮುರುಳಿಧರ ಹಾಸ್ಯ ನಟನೆ

ವಿಜಯನಗರ/ ಕೊಟ್ಟೂರು: ಮದ್ಯದಂಗಡಿಯಲ್ಲಿ ಮದ್ಯಪಾನಪ್ರಿಯರಿಂದ “ಕುಡುಕ ನನ್ಮಕ್ಳು” ಸಿನಿಮಾ ಶೀರ್ಷಿಕೆ ಅನಾವರಣ: ಇದು ಆಸ್ಕರ್ ಕೃಷ್ಣ ನಿರ್ದೇಶನದ 8ನೇ ಚಿತ್ರ.

ಹೊಸಚಿತ್ರಗಳ ಶೀರ್ಷಿಕೆಗಳನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳಿಂದ ಲೋಕಾರ್ಪಣೆಗೊಳಿಸುವ ಪರಿ ರೂಢಿಯಲ್ಲಿದೆ. ಆದರೆ ಒಂದು ಚಿತ್ರತಂಡ ಬಾರ್ ಒಂದರಲ್ಲಿ ಮದ್ಯಸೇವನೆ ಮಾಡಲು ಬಂದ ಮದ್ಯಪ್ರಿಯರಿಂದ ಸಿನಿಮಾ ಶೀರ್ಷಿಕೆ ಬಿಡುಗಡೆ ಮಾಡಿಸಿದ ವಿಭಿನ್ನ ಪ್ರಯೋಗ ನಡೆದಿದೆ ಎಂದು
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಮುರುಳೀಧರ ಅವರು ಹೇಳಿದರು.
ನಿರ್ದೇಶಕ ಆಸ್ಕರ್ ಕೃಷ್ಣ ನಿರ್ದೇಶನದ ಎಂಟನೇ ಚಿತ್ರವಾಗಿ ಶುರುವಾಗುತ್ತಿರುವ “ಕುಡುಕ ನನ್ಮಕ್ಳು” ಶೀರ್ಷಿಕೆಯನ್ನು ನಿನ್ನೆ ಬೆಂಗಳೂರಿನ ಉಲ್ಲಾಳದಲ್ಲಿರುವ ಬಾರ್ ಒಂದರಲ್ಲಿ ಬೆಳ್ಳಂಬೆಳಗ್ಗೆಯೇ ಮದ್ಯಪಾನ ಸೇವನೆ ಮಾಡಲು ಬಂದ ಮದ್ಯಪ್ರಿಯರಿಂದ ಲಾಂಚ್ ಮಾಡಿಸಲಾಗಿದೆ. ಇಂತಹ ವಿಭಿನ್ನ ಪ್ರಯೋಗದಲ್ಲಿ ಚಿತ್ರತಂಡ ಭಾಗವಹಿಸಿದ್ದು ಮದ್ಯಪಾನ ಮಾಡಲು ಬಂದ ಹಲವಾರು ಜನರನ್ನು ಮಾತನಾಡಿಸಿ ಅವರ ವ್ಯಸನಕ್ಕೆ ಕಾರಣವೇನು? ಎಂಬ ವಿಷಯಗಳನ್ನೂ ಸಹ ಸಂಗ್ರಹಿಸಿದೆ.
ಕಲಾಭೂಮಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಕುಡುಕ ನನ್ಮಕ್ಳು” ಚಿತ್ರಕ್ಕೆ ನಿರ್ದೇಶಕರ ಸ್ನೇಹಿತರಾದ ಅರುಣ ಶೆಟ್ಟಿ, ವೈಶಾಲಿ ಮುರುಳೀಧರ್ ಕೊಟ್ಟೂರು, ಪಲ್ಲವಿ ಅರುಣ್ ಅಗ್ನಿಹೋತ್ರಿ, ಎಸ್.ಹೆಚ್ ಬಾಬು ತುಮಕೂರು, ಬಿ.ನಿಂಗರಾಜು, ಲೋಕೇಶ್ ಎಸ್, ನಾಗಮಂಗಲ ಶ್ರೀನಿವಾಸ್, ಸಿದ್ದಲಿಂಗಯ್ಯ, ಗೋವಿಂದರಾಜು ಹಾಗೂ ಮುನಿ ಆಂಜನಪ್ಪ ಬಂಡವಾಳ ಹೂಡುತ್ತಿದ್ದಾರೆ.
ನಿರ್ಮಾಣದಲ್ಲಿ ಭಾಗಿಯಾಗಿರುವ ಬಿ.ನಿಂಗರಾಜು ಹಾಗೂ ಎಅ್ ಲೋಕೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ, ಅತಿ ಶೀಘ್ರದಲ್ಲಿ ಚಿತ್ರದ ಚಿತ್ರೀಕರಣ ಶುರು ಮಾಡುವುದಾಗಿ ಹೇಳಿದೆ. “ಕುಡುಕ ನನ್ಮಕ್ಳು” ಚಿತ್ರಕ್ಕೆ ಮಂಜುಕವಿ ಸಂಗೀತ ನೀಡಿ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ವೆಂಕಟ್ ರವರು ಒದಗಿಸಿದ್ದು, ಪ್ರದೀಪ್ ವಿ. ಬಂಗಾರಪೇಟೆ ಛಾಯಾಗ್ರಹಣ, ಅಯುರ್ ಸಂಕಲನ ಹಾಗೂ ಸತೀಶ್ ಕ್ಯಾತಘಟ್ಟ ಸಹನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲಿದ್ದಾರೆ.
“ಕುಡುಕ ನನ್ಮಕ್ಳು” ಚಿತ್ರದಲ್ಲಿ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ಚಂದ್ರಪ್ರಭ, ವಿನೋದ್ ಗೊಬ್ರಗಾಲ , ಕೊಟ್ಟೂರಿನ ಹೆಸರಾಂತ ವೈದ್ಯರಾದ ಡಾ: ಮನಸಾಲಿ ಮುರಳೀಧರ ಹಾಗೂ ಇತರರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದೊಂದು ಹಾಸ್ಯ ಚಿತ್ರವಿರಬಹುದೆಂದು ಅಂದಾಜಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಪೂರ್ತಿ ವಿವರಗಳು ಲಭಿಸಲಿವೆ ಎಂದು ಚಿತ್ರತಂಡ ತಿಳಿಸಿದೆ. ಪ್ರಭುದೇವ್ ವಕೀಲರು, ಮೈದೂರು ಶಿವಣ್ಣ ಮಾಜಿ ಯೋಧರು, ಲೋಕೇಶ್ ಗೌಡ,ಶಟ್ಟಿ ವೇಣು ಗೋಪಾಲ್,ಹನುಮಂತ ರೆಡ್ಡಿ, ಶಶಾಂಕ್,ಗುಬ್ಬಿ, ಪ್ರವೀಣ್ ಸೇರಿದಂತೆ ಮತ್ತಿರರು ಶುಭಾಶಯಗಳನ್ನು ತಿಳಿಸಿದ್ದಾರೆ.

ವರದಿ ಶಶಾಂಕ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!