ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಅಶ್ರಮದ ಪರಮ ಪೂಜ್ಯ ಶರಣಬಸವ ಶಾಸ್ತ್ರಿಗಳ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿರುವ ರವಿವಾರದ ಸತ್ಸಂಗವು ದಿ. 10 ರಂದು ಮುಂಜಾನೆ ಸಮಯ 8.30ಕ್ಕೆ ವಿವಿಧ ಧರ್ಮಾಚರಣೆಗಳು ಹಾಗೂ ಕ್ರಿಯಾಭಕ್ತಿಯಿಂದ ಸದ್ಗುರು ಸಿದ್ಧಾರೂಢರ ಪಂಚಾಮೃತ ಅಭಿಷೇಕವು ಹಾಗೂ ಸಿದ್ಧಾರೂಢರ ಹದಿನಾರನೆಯ ಕಥಾಮೃತದ ಪಾರಾಯಣವು ನಡೆಯಲಿದೆ. ಭಜನೆ, ನಾಮಸಂಕೀತ೯ನ, ಸದ್ಗುರು ಚಿಂತನ ಗುರುಸ್ತುತಿ, ಗುರುಸೇವಾಧುರೀಣರಿಗೆ ಸತ್ಕಾರ, ಮಂಗಲ ಪ್ರಸಾದ ಜರುಗುವುದು ಎಂದು ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















