ಬಳ್ಳಾರಿ / ಕಂಪ್ಲಿ : ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಸಮಾಜ ನೇಕಾರ ಪದ್ಮಶಾಲಿ ಸಮಾಜವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ರಾಮಸಾಗರ ಗ್ರಾಮದ ನೇಕಾರ ಪದ್ಮಶಾಲಿ ಬಹೂತ್ತಮ ಸಮಾಜ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ನೂಲು ಹುಣ್ಣಿಮೆ ಪ್ರಯುಕ್ತ ಶ್ರೀ ಭಕ್ತ ಮಾರ್ಕಂಡೇಶ್ವರ ಅವರ 18ನೇ ವರ್ಷದ ಜಯಂತಿ ಹಾಗೂ ರಾಷ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜವು ಎಲ್ಲಾ ರಂಗದಲ್ಲಿ ಹಿಂದುಳಿದಿದ್ದು, ಸರ್ಕಾರ ಸೌಲಭ್ಯಗಳನ್ನು ಕೊಟ್ಟರೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ, ಕುರುಗೋಡಿನಲ್ಲಿ ಒಂದು ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಕಂಪ್ಲಿಯಲ್ಲಿ ಜಾಗ ನೀಡಿದರೆ ಸಮುದಾಯ ಭವನಕ್ಕೆ ಅನುದಾನ ನೀಡುವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಸಮಾಜದ ಬದಲಾವಣೆಗೆ ಸಾಧ್ಯ. ಉನ್ನತ ಶಿಕ್ಷಣದೊಂದಿಗೆ ದೊಡ್ಡ ಮಟ್ಟಡ ಹುದ್ದೆಗಳನ್ನು ಹೊಂದಲಿದ್ದಾರೆ. ಸಮಾಜದ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಇತ್ಯಾರ್ಥಪಡಿಸಲಾಗುವುದು. ಮುಂದಿನ ದಿನದಲ್ಲಿ ಸಮುದಾಯ ಭವನ ಮತ್ತು ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನದ ಕಾಂಪೌಂಡ್ ಗೋಡೆ ನಿರ್ಮಿಸಿಕೊಡುವ ಭರವಸೆ ನೀಡಿದರು.
ಇಲ್ಲಿನ ಪ್ರಮುಖ ಬೀದಿಗಳಲ್ಲಿ ಜಯಂತಿ ಅಂಗವಾಗಿ ಭಕ್ತ ಮಾರ್ಕಂಡೇಶ್ವರ ಭಾವಚಿತ್ರ ಭವ್ಯ ಮೆರವಣಿಗೆ ಜರುಗಿತು. ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕಳಸ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ನೇಕಾರ ಸಮುದಾಯ ಅಧ್ಯಕ್ಷ ಪಿ.ಬಹ್ಮಯ್ಯ, ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ, ಪದ್ಮಶಾಲಿ ಬಹೂತ್ತಮ ಸಮಾಜ ಅಧ್ಯಕ್ಷ ಎನ್.ಮಂಜುನಾಥ, ಮುಖಂಡರಾದ ಹೆಚ್.ಶಿವಶಂಕರಗೌಡ, ಜಗದೀಶಗೌಡ, ಬಿ.ನಾರಾಯಣಪ್ಪ, ಡಾ.ಸುಧಾಕರ, ಸಿ.ಆರ್.ಹನುಮಂತ, ಪಿ.ಪಾಡುರಂಗ ದರೋಜಿ, ಚಂದ್ರ, ಟಿ.ಮಂಜುನಾಥ, ಪಿ.ವೆಂಕಟೇಶ, ಕಾಯಿಗಡ್ಡೆ ಮಂಜಪ್ಪ, ಪಿ.ಕನಕರಾಯ, ಪಿ.ನಾಗಪ್ಪ, ರಂಗಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















