ಚಾಮರಾಜನಗರ /ಗುಂಡ್ಲುಪೇಟೆ :
ಪುರಸಭೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಬಿಡಾಡಿ ದನಕರುಗಳು ರಸ್ತೆ ಮದ್ಯ ನಿಂತಿರುವುದು, ಮಲಗಿರುವುದು ವಾಹನ ಚಲಿಸುತ್ತಿರುವಾಗ ಮದ್ಯ ಬರುವುದು ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಮತ್ತು ಅಪಘಾತ ಆಗುತ್ತಿರುವ ಹಿನ್ನೆಲೆ ಪತ್ರಿಕೆಗಳಲ್ಲಿ ಸುದ್ದಿ ಪ್ರಸಾರವಾಗಿದ್ದು ಈ ಸಂಬಂಧ ದಿ. 15/6/25 ರಂದು ಪುರಸಭೆಯಿಂದ ಕಾರ್ಯಾಚರಣೆ ಮಾಡಿ 4 ಕರುಗಳ ಮಾಲೀಕರಿಗೆ ದಂಡ ವಿಧಿಸಿ ಮತ್ತೊಮ್ಮೆ ರಸ್ತೆ ಬಿಡದಂತೆ ಮುಚ್ಚಲಿಕ್ಕೆ ಪತ್ರ ಬರೆಸಿಕೊಂಡು ಬಿಡಲಾಯಿತು ಆದರೂ ಅವರ ವರ್ತನೆ ಬದಲಾವಣೆ ಮಾಡಿಕೊಳ್ಳದೆ ದನ ಕರುಗಳನ್ನು ಬೀದಿಗೆ ಬಿಟ್ಟಿದ್ದು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಜೊತೆಗೂಡಿ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ವಿಜಯ್ ಕುಮಾರ ಮತ್ತು ಅವರ ಸಿಬ್ಬಂದಿ ಮತ್ತು ಅರೋಗ್ಯ ಶಾಖೆಯ ಪರಿಸರ ಅಭಿಯಂತರರು ಆರೋಗ್ಯ ನಿರೀಕ್ಷಕರು ಪರಮೇಶ್ ಮೆಸ್ತಿ ಸಿದ್ದರಾಜು ಮೂರ್ತಿ ಜೆಸಿಬಿ ಚಾಲಕ ಕುಮಾರ ಮತ್ತು ಪೌರಕಾರ್ಮಿಕರು ಭಾಗವಹಿಸಿ 11 ದನಕರುಗಳನ್ನು ಹಿಡಿಯಲಾಯಿತು. ಮತ್ತು ಪಿಂಜಾರ್ ಪೋಲಿಗೆ ಬಿಡುವತನಕ ದನಕರುಗಳಿಗೆ ಹಸಿವು ಆಗದಂತೆ ಮೇವು ನೀಡಲಾಯಿತು.
ವರದಿ ಗುಂಡ್ಲುಪೇಟೆ ಕುಮಾರ್



















