ಚಿಕ್ಕಮಗಳೂರು/ ಕಡೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಶುಗರ್, ಬಿಪಿ ಕಾಯಿಲೆಗಳು ಪ್ರತಿಯೊಬ್ಬರಲ್ಲಿಯೂ ಸಾಮಾನ್ಯ ಎಂಬಂತಾಗಿದೆ ಇದಕ್ಕೆ ನಾವುಗಳು ಉಪಯೋಗಿಸುವ ಆಹಾರ ಕಾರಣ ರಾಸಾಯನಿಕ ರಸಗೊಬ್ಬರ ಬಳಸದೆ ಸಾವಯುವ ಗೊಬ್ಬರದಿಂದ ಬೆಳೆಯುವ ಸೊಪ್ಪು ತರಕಾರಿಗಳನ್ನು ಉಪಯೋಗಿಸುವುದರ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬೇಕಿದೆ ಎಂದು ಕಡೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಬಳ್ಳೇಕೆರೆ ವಿಶ್ವನಾಥ್ ತಿಳಿಸಿದರು. ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ರೈತ ಬಜಾರ್ ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಯಾವುದೇ ರಸಗೊಬ್ಬರಗಳನ್ನು ಬಳಸದೆ ಮನೆಯ ಹಸುಗೊಬ್ಬರವನ್ನು ಉಪಯೋಗಿಸಿಕೊಂಡು ವೈ ಮಲ್ಲಾಪುರದ ರೈತ ಷಣ್ಮುಖ ಇವರು ಬೆಳೆಯುತ್ತಿರುವ ಸೊಪ್ಪು ಹಾಗೂ ತರಕಾರಿ ಮಳಿಗೆಯನ್ನು ಪ್ರಾರಂಭಿಸಿ ಮಾತನಾಡಿ ಇದೇ ರೀತಿಯಲ್ಲಿ ಬೆಳೆಯುವ ರೈತರಗಳಿಂದ ನೇರವಾಗಿ ರೈತ ಬಜಾರ್ ನಿಂದ ಕೊಂಡು ನಿಖರವಾದ ಬೆಲೆಯಲ್ಲಿ ಗ್ರಾಹಕರಗಳಿಗೆ ದೊರಕಿಸಲು ರೈತ ಬಜಾರ್ ನಲ್ಲಿ ರೈತರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಗತಿ ಉತ್ಪಾದಕರ ಸಿಇಓ ಕುಮಾರ್ , ನಿರ್ದೇಶಕರುಗಳಾದ ಮಲ್ಲೇಶ್ವರ ಧರ್ಮಣ್ಣ, ಎಸ್ ಎಸ್ ಜಯಣ್ಣ, ಚಿರನಹಳ್ಳಿ ಬಸವರಾಜ್, ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಮಲ್ಲಿದೇವಿಹಳ್ಳಿ ಶ್ರೀನಿವಾಸ್ ಇದ್ದರು.
ವರದಿ ಮಲ್ಲಿದೇವಿಹಳ್ಳಿ ಶ್ರೀನಿವಾಸ್



















