ಬಳ್ಳಾರಿ / ಕಂಪ್ಲಿ : ಕರ್ನಾಟಕದಲ್ಲಿರುವ ಪ್ರವರ್ಗ-1 ಜಾತಿಯವರಲ್ಲಿ ಮೂರು ಜನಕ್ಕೆ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಪ್ರವರ್ಗ-1 (ಹಿಂದುಳಿದ ವರ್ಗ) ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ ಒತ್ತಾಯಿಸಿದರು.
ಅವರು ಪಟ್ಟಣದಲ್ಲಿ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಹಿಂದುಳಿದ ವರ್ಗದವರಿಗೆ ನಿರೀಕ್ಷಿತ ಸ್ಥಾನ ನೀಡಿಲ್ಲ. ಇದರಿಂದ ಪ್ರವರ್ಗ-1 ಸಂಪೂರ್ಣವಾಗಿ ಹಿಂದುಳಿಯುವಂತಾಗಿದೆ. 2015 ರ ಜಾತಿಗಣತಿ ಪ್ರಕಾರ ಕರ್ನಾಟಕ ರಾಜ್ಯದ 8.1% ಜನಸಂಖ್ಯೆಯನ್ನು ಹೊಂದಿರುವ ಪ್ರವರ್ಗ-1 ಜಾತಿಯವರಿಗೆ ಜನಸಂಖ್ಯೆಯ ಅನ್ವಯ ಸಚಿವ ಸ್ಥಾನ ನೀಡಬೇಕು. ಇದರಲ್ಲಿ ಗೊಲ್ಲರ (ಯಾದವ) ಸಮುದಾಯದ ಎಂಎಲ್ ಸಿ ಶ್ರೀನಿವಾಸ್, ಗಂಗಾಮತಸ್ಥ ಸಮುದಾಯದ ಎಂಎಲ್ ಸಿ ತಿಪ್ಪಣ್ಣ ಕಮಾಕನೂರು ಮತ್ತು ಉಪ್ಪಾರ ಸಮುದಾಯದ ಮೂರು ಭಾರಿ ಶಾಸಕರಾದ ಪುಟ್ಟರಂಗಶೆಟ್ಟಿ ಇವರಿಗೆ
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಚಿವರಾನ್ನಾಗಿ ಮಾಡಬೇಕೆಂದು ಆಗ್ರಹಿಸುವ ಜೊತೆಗೆ ಈ ನಿಟ್ಟಿನಲ್ಲಿ ಹಿಂದುಳಿದ ಸಂಘಟನೆಗಳು ಸ್ಥಳಿಯ ಕಾಂಗ್ರೆಸ್ ಘಟಕಗಳ ಮೇಲೆ ಒತ್ತಡ ಹಾಕಬೇಕಾಗಿದೆ ಹಿಂದುಳಿದ ವರ್ಗದವರು ಹೋರಾಟ ಮಾಡುವ ಮೂಲಕ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ವರದಿ : ಜಿಲಾನಸಾಬ್ ಬಡಿಗೇರ್



















