ಬಾಗಲಕೋಟೆ ಜಿಲ್ಲೆ / ಬಾದಾಮಿ ತಾಲೂಕು :
ನರಸಾಪುರ ಗ್ರಾಮದಲ್ಲಿ ದಿ. 12-8-2025 ರಂದು ಶ್ರೀ ಶರಣಬಸವೇಶ್ವರ ಪುರಾಣದಲ್ಲಿ ಬಿತ್ತುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಊರಿನ ಹಿರಿಯರು, ಯುವಕರು, ಭಜನಾ ಮೇಳದವರು ಎತ್ತುಗಳನ್ನು ಹೂಡಿಕೊಂಡು ಬಿತ್ತನೆಯನ್ನು ಆರಂಭಿಸಿದರು.
ಈ ಸಂದರ್ಭದಲ್ಲಿ ಬಾಂಡೆ ಸಾಮಾನುಗಳನ್ನು ಸವಾಲುಗಳನ್ನು ಮಾಡಲಾಯಿತು.
ಪುರಾಣ ಪ್ರವಚನ ನಡೆಯಿತು, ದಿನನಿತ್ಯ ಭಕ್ತಾದಿಗಳು ಅನ್ನ ಪ್ರಸಾದವನ್ನು ನೆರವೇರಿಸಿದರು.
ಬಿತ್ತುವ ಕಾರ್ಯಕ್ರಮಕ್ಕೆ ಕೂರಿಗೆ ಮತ್ತು ಕುಂಟೆ ಕೊಟ್ಟವರು ಶ್ರೀ ಇಮಾಮ ಹುಸೇನ್ ಸುಂಕದ ಅಜ್ಜನವರು.
ವರದಿ :ನಿಂಬಯ್ಯ ಕುಲಕರ್ಣಿ, ಬಾದಾಮಿ



















