ಉತ್ತರ ಕನ್ನಡ/ ಶಿರಸಿ : ಜಸ್ಟೀಸ್ ಜಿ ಎನ್ ಸಭಾಹಿತ, ಜಸ್ಟೀಸ್ ವಿ ಜಿ ಸಭಾಹಿತ ಸ್ಮರಣೆಯಂದು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಶ್ರೀ ಶಂಕರ್ ಹೆಗಡೆ ಭದ್ರನ್ ಅವರಿಂದ ಉಪನ್ಯಾಸ ಕಾರ್ಯಕ್ರವು ಅಗಸ್ಟ್ 23 ರ ಸಂಜೆ 4 ರಿಂದ ಶಿರಸಿ ಹಾಲೊಂಡ ಬಡಾವಣೆಯ ಗಾಯತ್ರಿ ಬಳಗದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಶಿರಸಿ ತಾಲೂಕ ಮಡಿವಾಳ ಸಂಘದ ಅಧ್ಯಕ್ಷ ಐ ಜಿ ಗಿಡ್ಡನ್ ಅವರ ಉಪಸ್ಥಿತಿಯಲ್ಲಿ ಸ್ವ ಉದ್ಯೋಗದ ಮಾದರಿಯಾಗಿರುವ ಸಂತೋಷ ಹೆಬ್ಬಾರ ಅವರನ್ನು ಗೌರವಿಸಲಾಗುವುದೆಂದು ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆ ಹಾಗೂ
ವಿ ಜಿ ಗಾಯತ್ರಿ ಇವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















