ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ವಲಯದ ಘಟಕ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ
“ಮೊದಲು ದೇಶ ಸೇವೆ” ಈ ದೇಶಕ್ಕೆ ಅನ್ನ ಕೊಡುವ ರೈತರೂ ಕೂಡಾ ದೇಶದ ಸೇವೆಗಾಗಿ ಪ್ರಮುಖ ಪಾತ್ರ ವಹಿಸುತ್ತಾರೆ, ದೇಶದಲ್ಲಿ ಪ್ರತಿಯೊಬ್ಬ ರೈತನು ಕೂಡಾ ಈ ದೇಶದ ನಾಯಕನೇ ಎಂದು ಮಲ್ಲಣ್ಣ ಗೌಡ್ರು ಪಾಟೀಲ್ ಹೇಳಿದರು.
ಲಾಭದಾಯಕ ಬೆಳೆ ಸಿಗಲು ರೈತರೆಲ್ಲಾ ಒಗ್ಗಟ್ಟಾಗಿ ಸಂಘಟನೆ ಬಲಪಡಿಸಬೇಕು ಎಂದು ಪ್ರಶಿಕ್ಷಣ ವರ್ಗದಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷರಾದಂತ ವಿವೇಕ್ ಮೊರೆ ಅವರು ಮಾತನಾಡಿದರು.
ಪ್ರತಿಯೊಬ್ಬ ರೈತರು ಸದಸ್ಯರಾಗಿ ಗ್ರಾಮ ಸಮಿತಿಯನ್ನು ಬಲಪಡಿಸಬೇಕು ಎಲ್ಲಾ ಗ್ರಾಮದವರು ಕೂಡಿ ತಾಲೂಕ ಮತ್ತು ಜಿಲ್ಲೆ, ಪ್ರಾಂತ್ಯ ಬಲಪಡಿಸಬೇಕು. ಪರಿಸರ ಉಳಿಸಬೇಕು, ಗಿಡಗಳನ್ನು ನೆಟ್ಟು ಉಳಿಸಬೇಕು, ಕೃಷಿ ತ್ಯಾಜ್ಯವನ್ನು ಸುಡಬಾರದು, ರೈತರು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಪ್ರತಿಯೊಬ್ಬ ರೈತರು ಲಾಭ ಪಡೆಯಬೇಕೆಂದು ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ್ ಬಗಲಿ ಅವರು ಮಾತನಾಡಿದರು.
ತಾಲೂಕ ಅಧ್ಯಕ್ಷರು ಈರಣ್ಣ ಗೊಟ್ಟಾಳವರು ರೈತ ಸಂಘಟನೆ ಬಲಪಡಿಸುವ ಕುರಿತು ಮಾತನಾಡಿ ಸಾಂತ್ವಾನ ನುಡಿ ಅರ್ಪಿಸಿದರು. ಹಾಗೂ ಈ ರೈತ ಪರ ಕಾರ್ಯಕ್ರಮಕ್ಕೆ ಜಾಗ ಒದಗಿಸಿಕೊಟ್ಟು ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಅಧ್ಯಕ್ಷರಾದ ಅಣ್ಣಪ್ಪ ಸಾಹುಕಾರ ಖೈನೂರ ಅವರು ವ್ಯವಸ್ಥೆ ಮಾಡಿಕೊಟ್ಟು ರೈತ ಪರ ಸಂಘಟನೆಗಳಿಗೆ ಅವರ ಬೆಂಬಲ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬಳ್ಳೊಳ್ಳಿ ಹೋಬಳಿಯ 25 ಗ್ರಾಮದ ರೈತರು ಹಾಜರಿದ್ದರು.
ರಮೇಶ್ ಗೌಡ ಬಿರಾದಾರ, ಸುಭಾಷ್ ನಾಯಕ, ಸಿದ್ದರಾಯ ಕುಂಬಾರ, ಚೆಂದ್ರೋಜಿ ಬಿರಾದಾರ, ಬಾಳಪ್ಪ ನೀಲಂಗಿ, ಕಾರ್ತೀಕ ನಿಲಂಗಿ, ಬಸವರಾಜ್ ಗೋಡೆಕೆ, ಬನಸಿದ್ದ ಗೋಡಕೆ ಸೇರಿದಂತೆ ಇನ್ನಿತರ ರೈತ ಮುಖಂಡರು ಪಾಲ್ಗೊಂಡಿದ್ದರು.
ವರದಿಗಾರರು ಆನಂದ ಹರಿಜನ



















