ಬಳ್ಳಾರಿ / ಕಂಪ್ಲಿ : ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಮತ್ತು ಎಲ್ಲರು ಸಂಘದಲ್ಲಿ ವ್ಯವಹಾರ ಮಾಡಿದರೆ, ಸಂಘವು ಅಭಿವೃದ್ಧಿ ಪಥದತ್ತ ಮುನ್ನುಗ್ಗಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಡಾ.ವೆಂಕಟೇಶ ಸಿ. ಭರಮಕ್ಕನವರ್ ಅಭಿಪ್ರಾಯಪಟ್ಟರು.
ಪಟ್ಟಣದ ಐತಿಹಾಸಿಕ ಸೋಮಪ್ಪ ದೇವಸ್ಥಾನ ಬಳಿಯಲ್ಲಿರುವ ಚೌಡಮ್ಮ ದೇವಿಯ ಆವರಣದಲ್ಲಿ ಸಪ್ತಗಿರಿ ಪತ್ತಿನ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನ 12ನೇ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು 1534 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 27ಲಕ್ಷ 49 ಸಾವಿರ ಶೇರು ಬಂಡವಾಳ ಇದೆ. ದುಡಿಯುವ ಬಂಡವಾಳ 2ಕೋಟಿ 82ಲಕ್ಷ ಸಂಗ್ರಹಿಸಿದೆ. ಸುಮಾರು 3ಕೋಟಿ42ಲಕ್ಷ ಸಾಲ ವಿತರಿಸಲಾಗಿದೆ. ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಟ್ ವಿತರಿಸಲಿದೆ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 19ಲಕ್ಷ 30 ಸಾವಿರ ರೂ.ಗಳ ನಿವ್ವಳ ಲಾಭಗಳಿಸಿದೆ. ಗ್ರಾಹಕರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್.ಎಂ.ನಾಗರಾಜ ಇವರು ವಾರ್ಷಿಕ ಮಹಾಜನ ಸಭೆಯ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಯು.ದೊಡ್ಡ ಬಸಪ್ಪ, ನಿರ್ದೇಶಕರಾದ ಎನ್.ಬಿ.ಮಂಜುನಾಥ, ಜಿ.ಪಕೀರಪ್ಪ, ಜೆ.ವೆಂಕಟೇಶ ಶ್ರೇಷ್ಟಿ, ಓ.ಪಿ ದಾದಾಖಲಂದರ್, ಎನ್.ವೀರೇಶ, ಆನಂದ ಹೆಚ್.ಹುಲ್ಲೂರು, ಸಂಘದ ಸಿಬ್ಬಂದಿಗಳಾದ ಎನ್.ಕನಕಪ್ಪ, ಸಾನಿಯಾ, ಎಚ್.ಒ.ಅನುರಾಧ, ದಸ್ತಗಿರಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















