ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬುದ್ಧನ ಕಂಡವರಾರು

  

       ಬುದ್ಧ ಬಸವ ಅಂಬೇಡ್ಕರರ
     ತತ್ವ ಆದರ್ಶ ಹೊಗಳುವವರು 
      ತಮ್ಮ ಮನ ಮಲಿನಗೊಳ್ಳಲು 
     ಪರಿಶುದ್ಧಗೊಳಿಸಿ ಬಾಳದವರು 

      ಜನರು ಸೇರಿದ ವೇದಿಕೆಯಲ್ಲಿ 
      ಜ್ಞಾನಿಗಳಂತೆ ಮೆರೆಯುವರು 
       ನಿಜ ಜೀವನದ ಅರ್ಥವನು
       ಇವರೆಂದು ಅರಿಯದವರು 

    ಆದರ್ಶ ಜೀವಿಗಳ ಬಗ್ಗೆ ಭವದಿ
   ಬರಿ ಮಾತಲಿ ಕೊಂಡಾಡುವರು 
   ನೀತಿ ತಿಳಿಯದ ಈ ಕೋತಿಗಳು 
   ಉಂಡ ಮನೆಗೆ ಕೆಂಡ ಸುರಿವರು

       ಬಾಳಿನಲ್ಲಿ ಆ ಬುದ್ಧನಂತೆ 
    ಅರಮನೆಯ ತೊರೆದವರಾರು 
      ಬದುಕಿನ ಸತ್ಯವನು ಹರವಿ
  ಜನಮನದ ಕಣ್ಣು ತೆರೆದವರಾರು 

     ಬಾಳಿನಲ್ಲಿ ಬೆಳಕು ಚೆಲ್ಲಿರುವ
      ನಿಜ ಬುದ್ದನ ಕಂಡವರಾರು 
      ಜ್ಞಾನದ ಬುತ್ತಿ ಬಿಚ್ಚಿಟ್ಟಿರಲು 
     ಹಸಿದು ಇಲ್ಲಿ ಉಂಡವರಾರು 
  • ಸಿದ್ಧರಾಮ ಸಿ ಸರಸಂಬಿ ಕಲಬುರ್ಗಿ✍️
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!