
ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಿ. ದೆಹಲಿ ಇವರ ಸಹಯೋಗದಲ್ಲಿ ಜರುಗಿತು.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ತಾಲೂಕಿನಲ್ಲಿ ಅಣಬೆ ಕೃಷಿಯ ಬಗ್ಗೆ ಒಂದು ದಿನದ ತರಬೇತಿಯನ್ನು ಹಾಗೂ ರೈತ ಜಾಗೃತಿ ಕಾರ್ಯಕ್ರಮವನ್ನು ಸಂಘಟನೆಯಿಂದ ನಿರುದ್ಯೋಗ ಯುವಕರಿಗೆ ಮತ್ತು ಮಹಿಳೆಯರಿಗೆ ರೈತರಿಗೆ ತರಬೇತಿಯನ್ನು ಏರ್ಪಡಿಸಲಾಗಿತ್ತು ಜಿಲ್ಲೆಯ ರೈತರು ಮತ್ತು ಯುವಕರು ತರಬೇತಿಯನ್ನು ಪಡೆದುಕೊಂಡು ಮತ್ತು ತರಬೇತಿ ಪಡೆದವರಿಗೆ ಉಚಿತ ಅಣಬೆ ಬೀಜಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಿ. ದೆಹಲಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ದೊಡ್ಡ ಬರಮಣ್ಣ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಡಾಕ್ಟರ್ ರಾಘವೇಂದ್ರ ಎಲಿಗಾರ್ ಹಿರಿಯ ವಿಜ್ಞಾನಿ ಮತ್ತು ಕೃಷಿ ಇಲಾಖೆ ಡಾಕ್ಟರ್ ಎಂ ಜೆ ರಾವ್ ವಿಶೇಷ ಅಧಿಕಾರಿ ಕೃಷಿ ಮಹಾವಿದ್ಯಾಲಯ ಗಂಗಾವತಿ ಡಾಕ್ಟರ್ ಕವಿತಾ ಉಳ್ಳಿ ಕಾಶಿ, ಗ್ರಹ ವಿಜ್ಞಾನಿ ಡಾಕ್ಟರ್ ಜ್ಯೋತಿ ತೋಟಗಾರಿಕೆ ಅಧಿಕಾರಿ ಮತ್ತು ಸಂಘಟನೆಯವರಾದ ದೇವಪ್ಪ ಹಳ್ಳಿಗುಡಿ ಜಿಲ್ಲಾ ಗೌರವಾಧ್ಯಕ್ಷರು ಹನ್ಮಂತಪ್ಪ ಬೇವೂರ್ ಜಿಲ್ಲಾ ಉಪಾಧ್ಯಕ್ಷರು ಪಿಡನಗೌಡ್ರು ಜಿಲ್ಲಾ ಕಾರ್ಯಧ್ಯಕ್ಷರು ರೈತರು ಮುಖಂಡರು ಆನಂದ , ಹೊನ್ನಪ್ಪ ಎಚ್ ತಳವಾರ್ ಕುಷ್ಟಗಿ ತಾಲೂಕ ಅಧ್ಯಕ್ಷ , ಯುವಕರು ಭಾಗಿಯಾಗಿ ಯಶಸ್ವಿಗೊಳಿಸಿದರು.
ಕೃಷಿ ವಿಜ್ಞಾನಿಗಳು ನುರಿತ ತರಬೇತಿದಾರರು ಸಹ ಭಾಗಿ ಇದ್ದರು.



















