
ಗುರುಮಠಕಲ್ ಪಟ್ಟಣಕ್ಕೆ ನ್ಯಾಯಾಲಯ
ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಎಚ್.ಜೆ ಬಸ್ ಘಟಕದ ಹತ್ತಿರದ ಸ್ಥಳ ಪರಿಶೀಲನೆ ಮಾಡಿದರು.
ಗುರುಮಠಕಲ್ :ಕಳೆದ ಕೆಲವು ದಿನಗಳ ಹಿಂದೆ ಪಟ್ಟಣದಲ್ಲಿ ನ್ಯಾಯಾಲಯ ಪ್ರಾರಂಭಕ್ಕಾಗಿ ಟೌನ್ ಹಾಲ್ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಎಚ್.ಜೆ ಅವರು ಭೇಟಿ ನೀಡಿ ಪರಶೀಲನೆ ನಡೆಸಿದರು.
ಅವರು ತಾಲ್ಲೂಕು ನ್ಯಾಯಾಲಯ ಸ್ಥಾಪನೆಗೆ ಬಹುದಿನಗಳ ಬೇಡಿಕೆ ಇದ್ದು ಇದರಿಂದ ನ್ಯಾಯಾಲಯ ಕೆಲಸಕ್ಕೆ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪಲಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಡಿಪೋ ಹತ್ತಿರದ ಸ್ಥಳ ಪರಿಶೀಲನೆ ಮಾಡಲಾಯಿತು.
ಗುರುಮಠಕಲ್ ನ್ಯಾಯಾಲಯ ಸೆಪ್ಟೆಂಬರ್ ತಿಂಗಳ ಉದ್ಘಾಟನಾ ಮಾಡಬೇಕು ಎಂದು ನ್ಯಾಯಾಧೀಶ ಮರುಳಸಿದ್ದರಾಧ್ಯ ಎಚ್.ಜೆ ತಿಳಿಸಿದರು.
ಟೌನ್ ಹಾಲ್ ಭವ್ಯ ಕಟ್ಟಡದಲ್ಲಿ ಬಹುದಿನಗಳ ಬೇಡಿಕೆಯಾದ ನ್ಯಾಯಾಲಯ ಕಟ್ಟಡ ಸ್ಥಾಪನೆಗೆ ಅವಶ್ಯವಿರುವ ಸ್ಥಳವನ್ನು ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಗುರುಮಠಕಲ್ ವ್ಯಾಪ್ತಿಯ ಜನರು ಪ್ರತಿ ಕೆಲಸಕ್ಕೆ ಸುಮಾರು 40 ಕಿ.ಮೀ. ದೂರದ ಯಾದಗಿರಿಯನ್ನು ಅವಲಂಭಿಸಿದ್ದು, ಗುರುಮಠಕಲ್ ನಲ್ಲಿ ನ್ಯಾಯಾಲಯ ಸ್ಥಾಪನೆಯಿಂದ ಬಡ ಜನರಿಗೆ ಅನುಕೂಲವಾಗಲಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಗ್ರ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಹಶಿಲ್ದಾರರ ಶಾಂತಗೌಡ ಬಿರಾದರ್, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ಎಸ್.ಪಾಟೀಲ್ ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ ದಂಡೋತಿ, ರಾಜರಮೇಶ ಗೌಡ, ಸಿಪಿಐ ವೀರಣ್ಣ ದೊಡ್ಡಮನಿ, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಎಎಸ್ಐ ಭೀಮಶಪ್ಪ ಕಾನಗಡ್ಡ, ಸಾಬಣ್ಣ ಗಣಪುರ, ಆನಂದ ನಿರೇಟಿ, ಕೃಷ್ಣಾ ಮೇದಾ, ದೇವಿಂದ್ರಪ್ಪ ಎಂ, ಗುರುನಾಥರೆಡ್ಡಿ ಅನಪುರ, ಕೃಷ್ಣಪ್ಪ ಸಿರಿಗೇಂ, ಮೋಹನ ಗಜರೆ, ಪಿಡಬ್ಲ್ಯುಡಿ ಎಇಇ ಪರಶುರಾಮ, ಸುನೀಲ್, ಸಂಜು ಕುಮಾರ್ ಚಂದಾಪುರ್, ದೊಡ್ಡ ಬಸವರಾಜ್, ಸರ್ವಯರ್, ಪವನ್ ವಕೀಲರು, ಪುರಸಭೆ ಸಿಬ್ಬಂದಿ ಕಂದಾಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















