ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ಕಲ್ಯಾಣ ಕರ್ನಾಟಕ ಉತ್ವವ ಆಚರಿಸಿ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ದ್ವಜಾರೋಹಣ ಮಾಡಿದರು. ಅವರು ಮಾತನಾಡುತ್ತಾ ಕಲ್ಯಾಣ ಕರ್ನಾಟಕದ 371ಜೆ ಯ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿಯಿಂದ ನಮ್ಮ ಭಾಗದ ಜನರಿಗೆ ಬಹಳ ಉಪಯುಕ್ತವಾಗಿದೆ. ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನಕ್ಕಾಗಿ ಹೋರಾಡಿದವರನ್ನು ನಾವು ಇಂದು ನೆನೆಪು ಮಾಡಿಕೊಳ್ಳಬೇಕು. ಅವರ ಶ್ರಮ, ಹೋರಾಟ ಮತ್ತು ತ್ಯಾಗವನ್ನು ನಾವು ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡುತ್ತ ಹೋರಾಟ ದಿಂದ ಹಕ್ಕುಗಳು ಸಿಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಹೋರಾಟದ ಮನೋಭಾವನೆಯನ್ನು ಮತ್ತು ಪ್ರೆಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್, ಡಾ. ಬಿ. ಆರ್ ಅಂಬೇಡ್ಕರ್, ಜವಾಹರ ಲಾಲ್ ನೆಹುರು, ಸುಭಾಸ್ ಚಂದ್ರಭೋಸ್ ಮುಂತಾದವರು ನಮ್ಮ ದೇಶದ ಸ್ವಾತಂತ್ರಕ್ಕಾಗಿ ತಮ್ಮ ತನು, ಮನ ಮತ್ತು ಧನವನ್ನು ಅರ್ಪಿಸಿದ್ದಾರೆ. ಇಂತಹ ಹೋರಾಟಗಾರರು ವಿಚಾರಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿತ್ತಾ ಹೈದರಾಬಾದ್ ನಿಜಾಮ್ ಆಡಳಿತ, ರಜಾಕರ ದಬ್ಬಾಳಿಕೆ, ದೌರ್ಜನ್ಯ ಮತ್ತು ಮೋಸದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಕರಾದ ಪ್ರೊ .ನಾಗರತ್ನ ತಮ್ಮಿನಾಳ, ಡಾ. ಹುಲಿಗೆಮ್ಮ, ಪ್ರೊ. ವಿಠೋಬ, ಡಾ. ಮಲ್ಲಿಕಾರ್ಜುನ, ಡಾ.ಪ್ರದೀಪ್ ಕುಮಾರ, ಡಾ. ನರಸಿಂಹ, ಡಾ. ಅಶೋಕ ಕುಮಾರ, ಶುಭಾ, ಸುಮಿತ್ರಾ, ಅಲ್ಲಾಭಕ್ಸಿ, ಹನುಮಪ್ಪ ಮೇಟಿ ಹಾಗೂ ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಪ್ರದೀಪ್ ಕುಮಾರ.ಯು ನಿರೂಪಿಸಿದರು. ಡಾ. ನರಸಿಂಹ ಸ್ವಾಗತಸಿದರು. ಡಾ. ಹುಲಿಗೆಮ್ಮ ವಂದಿಸಿದರು. ಕಾಲೇಜಿನ ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿನಿಯರು ಹಾಜರಿದ್ದರು.
- ಕರುನಾಡ ಕಂದ



















